ಮಗಲಾಯಿ ಹುಡುಗನ ಪಾರೆನ್ ಟೂರು-ಲೇಖಕ ಸಿದ್ದು ಯಾಪಲಪರವಿ ಅವರ ಇಂಗ್ಲೆಂಡ್ ಪ್ರವಾಸ ಕಥನ. ಚಿತ್ರದುರ್ಗದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬ್ರಹನ್ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಕೃತಿಗೆ ಬೆನ್ನುಡಿ ಬರೆದು ‘ಆತ್ಮವಂಚನೆಗೆ ಅವಕಾಶ ಇಲ್ಲದಂತೆ ಸರಳವಾಗಿ ವಿಷಯ ನಿರೂಪಣೆ ಇದೆ. ಎಲ್ಲನ್ನೂ ಬಿಚ್ಚಿಡುವ ಪ್ರಾಮಾಣಿಕತೆ ಇದೆ. ನಾವೂ ಸಹ ಆ ದೇಶದಲ್ಲಿ ಇಣುಕಿ ಹಾಕಿದ ಅನುಭವವಾಗುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಸಾಹಿತಿ ಬೀದರನ ಬಿ.ಜಿ. ಸಿದ್ಧಬಟ್ಟೆ ಅವರು ಕೃತಿಯ ಕುರಿತು ‘ಪ್ರಬುದ್ಧರಾದ ಮೇಲೂ ಮುಗ್ಧತೆಯಿಂದ ಬದುಕುವುದು ಒಂದು ಸವಾಲು. ಅದಕ್ಕೆ ಉದಾಹರಣೆ, ಸಿದ್ದು ಯಾಪಲಪರವಿ ಹಾಗೂ ಅವರ ‘ಮಗಲಾಯಿ ಹುಡುಗನ ಪಾರಿನ್ ಟೂರು’ ಕೃತಿ. ಈ ಪ್ರವಾಸ ಕಥನವು ಮಡಿವಂತಿಕೆಗಳನ್ನು ದೂರವಿಟ್ಟು ಅದೆಷ್ಟೋ ಸಂಗತಿಗಳನ್ನು ಚರ್ಚಿಸುತ್ತದೆ. ಬಿಸಿ ಅಪ್ಪುಗೆ ಚುಂಬನಗಳ ಚುಂಬಕತೆ, ಲೈಂಗಿಕ ಎದೆಗಾರಿಕೆಯ ಗತ್ತು, ಲಿವಿಂಗ್ ಟುಗೆದರ್ ದಾಂಪತ್ಯ, ಗೇ, ಲೆಸ್ಬಿಯನ್ಸ್: ಲೈಂಗಿಕ ಹಕ್ಕು, ಖಾಸಗಿ ಬದುಕಿನ ಗುಟ್ಟುಗಳನ್ನು, ಹೆಣ್ಣು-ಗಂಡು ಮತ್ತು ತೃತೀಯ ಲಿಂಗಿಗಳ ದೈಹಿಕ-ಮಾನಸಿಕ ತಲ್ಲಣಗಳನ್ನು ವಾಸ್ತವಿಕ ನೆಲೆಯಲ್ಲಿ ಸೆರೆ ಹಿಡಿದಿರುವುದು ವಿನೂತನ. ದಶಕದ ಹಿಂದೆ ಅವಾಸ್ತವ ಎನಿಸಿದ್ದ ಸಂಗತಿಗಳ ಮೇಲೆ ದೂರಾಲೋಚನೆಯ ಬೆಳಕು ಚೆಲ್ಲಿದ್ದು ಗಮನಿಸಬಹುದು. ಇಲ್ಲಿಯ ಬರಹಗಳು ಸೆಕ್ಸಿ ಎನಿಸಿದರೂ ಓದುಗನ ಚಿತ್ತ ವಿಚಲಿತಗೊಳಿಸದ ಚಾಕಚಕ್ಯತೆ ಇದೆ. ಬರಹ ಪ್ರಾಮಾಣಿಕವಾಗಿದೆ. ಆ ಕಾರಣಕ್ಕಾಗಿ, ತಾಜಾತನವಿದೆ. ಕುರುಡು ನಂಬಿಕೆಗೆ ಬಲಿಯಾಗದ ಸಾತ್ವಿಕ ಮನೋಧರ್ಮವಿದೆ’ ಎಂದು ಪ್ರಶಂಸಿಸಿದ್ದಾರೆ.
ಸಿದ್ದು ಯಾಪಲಪರವಿಯವರು ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿಯವರು. ಸರಕಾರಿ ಶಾಲೆಗಳಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿ ಗದುಗಿನ ಕನಕದಾಸ ಸಮಿತಿಯ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬರಹ, ಮಾತು, ತರಬೇತಿ ಹಾಗೂ ಪ್ರವಾಸ ಇವರ ನೆಚ್ಚಿನ ಪ್ರವೃತ್ತಿ. ಉಪನ್ಯಾಸಗಳು, ವಚನ ಚಳವಳಿ, ಸಾಹಿತ್ಯ, ಸಂಸ್ಕೃತಿ, ಸಿನೆಮಾ, ರಾಜಕಾರಣ ಹಾಗೂ ಆಧ್ಯಾತ್ಮ ಕುರಿತು ಚಿಂತನ- ಮಂಥನ ನಡೆಸುತ್ತಾ ದೇಶ-ವಿದೇಶಗಳಿಗೂ ಭೇಟಿ ನೀಡಿ ಜೀವನ ಕೌಶಲ್ಯ ಕುರಿತ ತರಬೇತಿ ನೀಡುತ್ತಾ ಬಂದಿದ್ದಾರೆ. ಕಳೆದ ಒಂದು ದಶಕದಿಂದ ’ಸಿದ್ದು ಕಾಲ' ಎಂಬ ಬ್ಲಾಗಿನ ಮೂಲಕ ಲೇಖನಗಳನ್ನು ಬರೆಯುತ್ತಿದ್ದಾರೆ. 1999-2002 ರವರೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿದ್ದರು. ಕಾರಟಗಿ ನೂತನ ತಾಲೂಕಿನ ಪ್ರಥಮ ...
READ MORE