ಸಾಗರದಾಚೆಯ ನಾಡಿನಲಿ ಎಸ್.ಪಿ. ವಿಜಯಲಕ್ಷ್ಮಿ ಅವರ ಪ್ರವಾಸಕಥನವಾಗಿದೆ. ಮಾಧ್ಯಮಿಕ ಶಾಲಾ ದಿನಗಳಲ್ಲೇ ಬಹುಶಃ ನನ್ನೊಳಗೊಬ್ಬ ಪ್ರವಾಸಿಗ ಜನ್ಮ ತಾಳಿರಬೇಕು. ಸಣ್ಣದೊಂದು ಊರು. ಆಚೀಚೆಯ 20 ಮೈಲಿ ದೂರದ ಹಳ್ಳಿಗಳನ್ನೂ ಕಂಡಿಲ್ಲದವಳ ಕಿವಿಗೆ ಬಿದ್ದ ಒಂದು ಭಾಷಣ ರಷ್ಯಾದ ಕುರಿತು_ ಸದ್ದಿಲ್ಲದೆ ನನ್ನೊಳಗೆ ವಿದೇಶ ಕಾಣುವ ದೊಡ್ಡದೇ ಕನಸೊಂದನ್ನು ತಹತಹವಿಲ್ಲದಂತೆ ಬೆಳೆಸುತ್ತಾ ಬಂದಿರಬೇಕು, ನನಗೂ ಗೊತ್ತಾಗದಂತೆ ಚಿಕ್ಕ ಹುಡುಗಿ. ಆ ಊರಿನಲ್ಲಿ ತೀರಾ ಅಪರೂಪಕ್ಕೆನ್ನುವಂತೆ ಆಗಸದ ಮೇಲ್ಭಾಗದಲ್ಲಿ ಒಮ್ಮೊಮ್ಮೆ ಚುಕ್ಕಿ ಆಕಾರದಲ್ಲಿ ವಿಮಾನ ಒಂದು ಹಾರುವುದನ್ನು, ಅದರ ಪುಟ್ಟ ಶಬ್ದದ ಮೂಲಕ ಕೇಳಿ ಮನೆಯಾಚೆ ಓಡಿ ಬಂದು ಅಂಗಳದಲ್ಲಿ ನಿಂತು ವಿಸ್ಮಯದಿಂದ ಆ ಚುಕ್ಕಿಯಂತಹ ವಿಮಾನ ಕಣ್ಮರೆಯಾಗುವವರೆಗೂ ನೋಡುತ್ತಾ ನಿಲ್ಲುತ್ತಿದ್ದ ವಿಸ್ಮಯದ ದಿನಗಳು ಎದೆಯೊಳಗೆ, 'ಒಮ್ಮೆ ಅದರಲ್ಲಿ ನಾನೂ ಕೂರಬಹುದಾ ಎನ್ನುವ ಆಸೆಯ ಬೀಜವೊಂದನ್ನು ಬಿತ್ತಿಬಿಟ್ಟಿತ್ತು. ಅಲಾಸ್ಕ, ಯುರೋಪ್ ಜಪಾನ್, ಥೈಲ್ಯಾಂಡ್, ಕಾಂಬೋಡಿಯ ಇತ್ಯಾದಿ ದೇಶಗಳ ಪ್ರವಾಸ ಕಥನ ಧಾರಾವಾಹಿಯಾಗಿ ಪ್ರಕಟವಾಗಿ , ಓದುಗರನ್ನು ರಂಜಿಸಿ ಈಗ ಅವು ಪುಸ್ತಕರೂಪವನ್ನು ಪಡೆದವು. ಅವುಗಳಲ್ಲಿ ಮೊದಲ ಪುಸ್ತಕವೇ ಈ, "ಸಾಗರದಾಚೆಯ ನಾಡಿನಲ್ಲಿ" ಎನ್ನುವ ಯೂರೋಪ್ ಪ್ರವಾಸ ಕಥನ.
ಎಸ್. ಪಿ ವಿಜಯಲಕ್ಷ್ಮಿ ಅವರು ಮೂಲತಃ ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದವರು. ಅವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ನರಸಿಂಹರಾಜಪುರದಲ್ಲಿ ಮತ್ತು ಪಿಯುಸಿ ನಂತರದ ವಿದ್ಯಾಭ್ಯಾಸವನ್ನು ಭದ್ರಾವತಿಯ ಭದ್ರಾಕಾಲೇಜಿನಲ್ಲಿ ಪೂರೈಸಿದರು. ವಿಜಯ ಕರ್ನಾಟಕ, ಸುಧಾ, ತರಂಗ, ಕರ್ಮವೀರ, ತುಷಾರ, ಮಂಗಳ ಪತ್ರಿಕೆಗಳಿಗೆ ಕಥೆ, ಕವನ, ಮಹಿಳಾಲೇಖನ, ಪ್ರವಾಸ ಲೇಖನಗಳನ್ನು ಬರೆಯುತ್ತಿರುವೆ. ಕನ್ನಡ ರಾಜ್ಯೋತ್ಸವದ ಸುವರ್ಣಮಹೋತ್ಸವ ವರ್ಷದಲ್ಲಿ ಬಹಳಷ್ಟು ವೇದಿಕೆಗಳ ಹತ್ತಿಪ್ಪತ್ತು ಕವನಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಗಳಿಸಿದ್ದಾರೆ. "ಮಂಗಳ" ವಾರಪತ್ರಿಕೆಯಲ್ಲಿ ಮೂರು ವರ್ಷಗಳು ಬೇರೆ ಬೇರೆ ದೇಶಗಳ "ಪ್ರವಾಸ ಕಥನ" ನಿರಂತರ ಧಾರಾವಾಹಿಯಾಗಿ ಪ್ರಕಟವಾಗಿದೆ. ಕೃತಿಗಳು : ಚಿತ್ತ ತೂಗಿದಾಗ ಮತ್ತು ...
READ MORE