ಲೇಖಕಿ ಎನ್.ಎಸ್. ಸರಸ್ವತಿ ನಾಗರಾಜ ಅವರ ಮೊದಲ ಕೃತಿ - ನಾವು ನೋಡಿದ ಪಶ್ಚಿಮ ದೇಶಗಳ ಒಂದು ಇಣುಕು ನೋಟ. ಬ್ರಿಟನ್ ಮತ್ತು ಅಮೇರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಅವರು ಮಾಡಿದ ಪ್ರವಾಸಾನುಭವವನ್ನು ಇಲ್ಲಿ ಕಣ್ಣಿಗೆ ಕಟ್ಟಿದಂತೆ ರಚಿಸಿದ್ದಾರೆ. ಒಬ್ಬೊಬ್ಬ ಲೇಖಕರ ವಿಶೇಷ ಗಮನಕ್ಕೆ ಒಂದೊಂದು ವಿಷಯ ದಕ್ಕುತ್ತದೆ. ತಾವು ನೋಡಿದ ನಿಸರ್ಗ ಮತ್ತು ಭೌತಿಕ ಪ್ರಪಂಚದ ವಿವರಗಳನ್ನು ಕೊಡುತ್ತಲೇ ಅವರು ತಿಳಿಸಿರುವ ಸಾಂಸ್ಕೃತಿಕ ವಿಲಕ್ಷಣತೆಯ ಹೊಳಹುಗಳು ನಮಗೆ ಮುಖ್ಯವಾಗುತ್ತವೆ. ಇದನ್ನು ಲೇಖಕ ಪ್ರಣತಾರ್ತಿಹರನ್ ಸಂಪಾದಿಸಿದ್ದಾರೆ.
ಸಾಹಿತ್ಯ ರಂಗದಲ್ಲಿ ನಿರಂತರ ಬರೆಯುವ ಸೃಜನಶೀಲತೆಯನ್ನು ಕಾಪಿಟ್ಟುಕೊಂಡಿರುವ ಪ್ರಣತಾರ್ತಿಹರನ್ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಬಸವಾಪಟ್ಟಣದವರು. ತೋಟಗಾರಿಕೆಯೇ ಕುಲಕಸುಬಾಗಿದ್ದ, ಹರಿಕಥೆ ಮತ್ತು ಗಮಕ ಕಲೆಯನ್ನು ರೂಢಿಸಿಕೊಂಡ ಪೂರ್ವಿಕರಿದ್ದ ಮನೆತನದಲ್ಲಿ ಹುಟ್ಟಿ, ಪ್ರಖರ ಸಾಂಸ್ಕೃತಿಕ ಮತ್ತು ವಿದ್ವತ್ ಪರಿಸರದ ಸಂಸ್ಕಾರ ಪಡೆದವರು ಪ್ರಣತಾರ್ತಿಹರನ್. ಜಾನಪದ ಮತ್ತು ಭಾರತೀಯ ಸಾಹಿತ್ಯದ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ಧಾರೆ. 2015ನೇ ಸಾಲಿನ ಪ್ರವಾಸ ಸಾಹಿತ್ಯ ಪ್ರಕಾರದ ಅತ್ಯುತ್ತಮ ಕೃತಿಗೆ ಅವರ ‘ಆಸುಪಾಸು’ ಪ್ರವಾಸ ಕಥನ ಆಯ್ಕೆಯಾಗಿದೆ. ...
READ MORE