ಆಫ್ಘಾನಿಸ್ತಾನ! ವಿಭಿನ್ನ ಕಾರಣಗಳಿಗಾಗಿ ಆಫ್ಘಾನಿಸ್ತಾನ ಎಂದಿಗೂ ಜಗತ್ತಿನ ಕೌತುಕ ರಾಷ್ಟ್ರವೇ! ಆಫ್ಘಾನಿಸ್ತಾನ, ಅಲ್ಲಿನ ಸಾಮಾಜಿಕ-ರಾಜಕೀಯ ಪರಿಸ್ಥಿತಿ, ಉಗ್ರಚಟುವಟಿಕೆ ಮತ್ತು ಸಾಲು-ಸಾಲು ಯುದ್ಧಗಳ ಬಗ್ಗೆ ಈಗಾಗಲೇ ಹಲವರು ತಮ್ಮದೇ ರೀತಿಯಲ್ಲಿ ಚಿತ್ರಿಸಿಯಾಗಿದೆ. ಆದರೆ ಇವೆಲ್ಲಕ್ಕಿಂತಲೂ ಭಿನ್ನವಾಗಿ ನಿಲ್ಲುವ ಮತ್ತು ಹೊರಜಗತ್ತಿಗೆ ಅಷ್ಟು ಸುಲಭವಾಗಿ ನಿಲುಕದ ಅನೂಹ್ಯ ಲೋಕವೊಂದರ ಚಿತ್ರಣವನ್ನು ತೆರೆದಿಡುವ ವಿಶಿಷ್ಟ ಪ್ರಯತ್ನ ಇದು. ಆಫ್ಘಾನಿನ ಯುದ್ಧಕಾಲದಲ್ಲಿ ನ್ಯಾಟೊ ಮತ್ತು ಅಮೆರಿಕೆಯ ಮಿಲಿಟರಿ ಯುದ್ಧ ಶಿಬಿರಗಳಲ್ಲಿ, ಅಷ್ಟೇ ಅಲ್ಲದೆ ಅಲ್ಲಿನ ಯುದ್ಧಪೀಡಿತ ಅಸುರಕ್ಷಾ ಹೊರವಲಯಗಳಲ್ಲಿ ಸೈನಿಕನಲ್ಲದ ಸಾಮಾನ್ಯ ಕನ್ನಡಿಗನೊಬ್ಬ ಕಳೆದ ಅಸಾಮಾನ್ಯ ಅನುಭವ ಕಥನದ ಸಾರ ಇದು. ಆಫ್ಘಾನಿಸ್ತಾನದ ಅನುಭವವಷ್ಟೇ ಅಲ್ಲದೆ ಒಂದು ಕಾಲದಲ್ಲಿ ಯುದ್ಧಬಭಾದಿತ ಯುಗೋಸ್ಲೋವಿಯಾದ ಅಂಗವಾಗಿದ್ದ ಮೆಸಿಡೋನಿಯ, ಆಗಷ್ಟೇ ಯುದ್ಧದಿಂದ ನಲುಗಿದ್ದ ಇರಾಕ್ ಮತ್ತು ಸೌದಿ-ಯೆಮೆನ್ ಗಡಿಗಳಲ್ಲಿ ಆದ ದಾಖಲಿಸಲರ್ಹ ಕೆಲ ವಿಶೇಷ ಅನುಭವಗಳೂ ಇಲ್ಲಿವೆ.
ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ 1982 ರಂದು ಜನನ. ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಹಾಗು ಪ್ರೌಢಶಾಲಾ ಶಿಕ್ಷಣ ಆಗಿದ್ದು ಕುಣಿಗಲ್ಲಿನಲ್ಲಿಯೇ. ವಿದ್ಯುತ್ ಮತ್ತು ವಿದ್ಯುನ್ಮಾನ ಇಂಜಿನಿಯರಿಂಗ್ ಡಿಪ್ಲೋಮಾ ವ್ಯಾಸಂಗ ಆಗಿದ್ದು ತುಮಕೂರಿನ ಸರ್ಕಾರೀ ಪಾಲಿಟೆಕ್ನಿಕ್ ಕಾಲೇಜಿನಲ್ಲಿ. 2001ನೆಯ ಇಸವಿಯಲ್ಲಿ ಬಳ್ಳಾರಿಯ ಜಿಂದಾಲ್ ವಿಜಯನಗರ ಉಕ್ಕಿನ ಕಾರ್ಖಾನೆಯಲ್ಲಿ (ಜೆ ಎಸ್ ಡಬ್ಲ್ಯೂ) ಕಿರಿಯ ಇಂಜಿನಿಯರಾಗಿ ಕೆಲಸಕ್ಕೆ ಸೇರಿದ್ದು. ಅದಾದ ಐದು ವರ್ಷಗಳ ನಂತರ ಎಲ್&ಟಿ ಕಂಪನಿಗೆ ಸೇರಿ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯದಲ್ಲಿ ಎರಡು ವರ್ಷ ಇಂಜಿನಿಯರಾಗಿ ಕೆಲಸ. ತದನಂತರ ದುಬೈನಲ್ಲಿ ಕೆಲಸ ಮಾಡುವ ಅವಕಾಶ ...
READ MORE