‘ಇದು ಕಾಶಿ ಇದು ವಾರಣಾಸಿ’ ಲೇಖಕ ಆಗುಂಬೆ ಎಸ್. ನಟರಾಜ್ ಅವರ ಪ್ರವಾಸ ಕಥನ. ಮತ್ಸ್ಯ ಪುರಾಣದಲ್ಲಿ ಪವಿತ್ರ ಕಾಶಿಯನ್ನು ಅಥವಾ ವಾರಣಾಸಿ ಕ್ಷೇತ್ರವನ್ನು ಅತ್ಯಂತ ಪವಿತ್ರಕ್ಷೇತ್ರ ಮತ್ತು ಇಲ್ಲಿ ಯಾವಾಗಲೂ ಶಿವನ ಸಾನಿಧ್ಯವಿರುವುದು ಮತ್ತು ಈ ಕ್ಷೇತ್ರ ಸಕಲ ಜಂತುಗಳಿಗೂ ಮೋಕ್ಷಪ್ರದವಾಗಿರುವುದು ಎಂದು ವರ್ಣಿಸಿ ಕಾಶಿಯ ಮಹಿಮೆಯನ್ನು ಕೊಂಡಾಡಿದೆ. ಅಂಥಾ ಕಾಶಿಯ ಬಗ್ಗೆ ಅತ್ಯಂತ ವಿವರವಾಗಿ ಆಗುಂಬೆ ನಟರಾಜ್ ಬರೆದಿದ್ದಾರೆ. ಇದು ಕೇವಲ ಪ್ರವಾಸ ಕಥನವಾಗದೇ ಸಂಶೋಧನಾಯುಕ್ತ ಹಾಗೂ ಜನಸಾಮಾನ್ಯರಿಗೆ ಉಪಯುಕ್ತವಾಗುವ ಗ್ರಂಥವಾಗಿದೆ.
ಲೇಖಕ ನಟರಾಜ್, 1939 ನವೆಂಬರ್ 20 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹುಟ್ಟಿದರು. ತಂದೆ ಎ. ಎಸ್. ಭಟ್, ತಾಯಿ ಲಕ್ಷ್ಮಮ್ಮ. ಕಾಲೇಜು ದಿನಗಳಿಂದಲೂ ಸಾಹಿತ್ಯದ ಬಗ್ಗೆ ಒಲವಿದ್ದು, ನಿವೃತ್ತಿಯ ನಂತರ ಈಗ ಪೂರ್ಣ ಪ್ರಮಾಣದ ಬರಹಗಾರರು. ಸದಾ ಒಂದಿಲ್ಲೊಂದು ಕಡೆ ಪ್ರವಾಸ ಅಥವಾ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗುತ್ತಾರೆ. ಅವರ ಪ್ರವಾಸಾನುಭವದ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ಬಾತುಕೋಳಿ’ ಮತ್ತು ‘ಆತಂಕ’ ಎಂಬ ಎರಡು ಕಾದಂಬರಿಗಳು. ‘ಚಕ್ಕಂದ’ ಎಂಬ ಹನಿಗವನ ಸಂಕಲನ, ‘ರಸನಿಮಿಷ’ ಎಂಬ ಹಾಸ್ಯಕಥೆಗಳ ಸಂಗ್ರಹ. ‘ರಸ ವೈಚಾರಿಕತೆ’ ಎಂಬ ವೈಚಾರಿಕ ...
READ MORE