‘ಅಟ್ಲಾಂಟಿಕದಾಚೆಗೆ’ ಲೇಖಕಿ ಸುಧಾಮೂರ್ತಿ ಅವರ ಪ್ರವಾಸಕಥನ. ವೇಗದ ವಿಮಾನಗಳಿಂದ ಈ ಪ್ರಪಂಚವೇ ಆಕುಂಚನ ಹೊಂದಿದೆ. ಅಂಥದರಲ್ಲಿ ಅಮೇರಿಕೆಗೆ ಹೋಗಿಬರುವುದು ಯಾವ ಪ್ರಯಾಸದ ಕೆಲಸವಲ್ಲ. ಅದರಲ್ಲಿಯೂ ಭಾಷೆಯನ್ನು ಬಲ್ಲವರಿಗೆ ಯಾವುದು ಕಷ್ಟ? ನಾನೇನು ನೀಲ್ ಆರ್ಮ್ ಸ್ಟ್ರಾಂಡ್ ನಾಗಲೀ, ಕೋಲಂಬಸ್ ಆಗಲಿ ಅಲ್ಲ, ಡೇವಿಡ್ ಲಿವಿಂಗಸ್ಟನ್ ನಾಗಲಿ ಅಲ್ಲ, ಅಥವಾ ಜೀವವನ್ನು ಒತ್ತೆ ಇಟ್ಟು ಕೇವಲ ಜ್ಞಾನಾರ್ಜುನೆಗಾಗಿ ಹೊರಟಂತಹ ಹುಯೇನ್ ತ್ಸುಂಗನೂ ಅಲ್ಲ. ನಾನು ಸಾಮಾನ್ಯ ಪ್ರವಾಸಿ ಎನ್ನುವ ಸುಧಾಮೂರ್ತಿ, ಅಪರಿಚಿತ ದೇಶದಲ್ಲಿ ನಾನು ಒಬ್ಬಳೇ ಎಲ್ಲ ಸ್ಥಳಗಳಿಗೆ ಹೋದಾಗ ನನಗೆ ಆಗಿರುವ ಅನುಭವವನ್ನು ನನ್ನ ದೃಷ್ಟಿಯಲ್ಲಿ ಯಾವುದು ಮಹತ್ವವಿದೆ ಅಂತಹ ಪ್ರಸಂಗವನ್ನು ನಾನು ಬರೆದಿರುವೆ ಎನ್ನುತ್ತಾರೆ ಸುಧಾಮೂರ್ತಿ.
ಕನ್ನಡ ಹಾಗೂ ಇಂಗ್ಲಿಷ್ ಬರಹಗಾರ್ತಿ, ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಜನಿಸಿದ್ದು 1950 ಆಗಸ್ಟ್ 18ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ. ತಾಯಿ ವಿಮಲಾ, ತಂದೆ ರಾಮಚಂದ್ರ ಕುಲಕರ್ಣಿ. ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದ ಇವರು ಕನ್ನಡ ಹಾಗೂ ಇಂಗ್ಲಿಷ್ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡಿದ್ದಾರೆ. ಅತಿರಿಕ್ತೆ, ಅವ್ಯಕ್ತೆ, ಮಹಾಶ್ವೇತೆ, ಡಾಲರ್ ಸೊಸೆ, ಋಣ, ತುಮುಲ, ಯಶಸ್ವಿ (ಕಾದಂಬರಿ), ಸಾಮಾನ್ಯರಲ್ಲಿ ಅಸಮಾನ್ಯರು (ಅಂಕಣ ಬರಹಗಳು), ಗುಟ್ಟೊಂದು ಹೇಳುವೆ, ಮನದ ಮಾತು (ಅನುಭವ ಕಥನ), ಹಕ್ಕಿಯ ತೆರದಲಿ ಮುಂತಾದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಸುಧಾ ಮೂರ್ತಿ ಅವರಿಗೆ ರೋಟರಿ ...
READ MORE