ಹೃದಯವಂತಿಕೆ ಇಲ್ಲದ ಬುದ್ದಿವಂತಿಕೆ ಅಪಾಯಕಾರಿ! ಹಾಗೆಯೇ ನಿಜವಾದ ಹೃದಯವನ್ನು ಅರಿತುಕೊಳ್ಳದ ಬುದ್ಧಿವಂತಿಕೆ ನಿರರ್ಥಕ! ದೇಹದ ಪ್ರಮುಖ ಅಂಗವಾದ ಹೃದಯದ ನಿಜರೂಪ, ಅದಕ್ಕೆ ಆಗುವ ತೊಂದರೆಗಳು, ಹೃದಯಾಘಾತವನ್ನು ಮುಂತಾದ ಪ್ರಮುಖ ವಿಷಯಗಳನ್ನು ತಡೆಯುವ ಕ್ರಮ, ಅದನ್ನು ಕಾಪಾಡಿಕೊಳ್ಳಲು ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು, ಜನಸಾಮಾನ್ಯರಿಗೆ ತಿಳಿಯುವ ಧಾಟಿಯಲ್ಲಿ ಸಂಕ್ಷಿಪ್ತವಾಗಿ,ಸರಳವಾಗಿ, ಸ್ಪಷ್ಟವಾಗಿ ಈ ಕೃತಿಯಲ್ಲಿ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿಯವರು ವಿವರಿಸಿದ್ದಾರೆ. ಜನಸಾಮಾನ್ಯರಿಗೆ ಪ್ರಮುಖ ಸವಾಲಾಗಿರುವ ಹೃದಯದ ಸಮಸ್ಯೆಯ ಬಗ್ಗೆ ಈ ಕೃತಿಯೂ ವಿವರಗಳನ್ನು ನೀಡುತ್ತದೆ.
ವೃತ್ತಿಯಲ್ಲಿ ವೈದ್ಯೆಯಾಗಿ, ವಿಶೇಷವಾಗಿ ಮಕ್ಕಳ ಹೃದಯತಜ್ಞೆಯಾಗಿ, ಬಡವರ ಬಗ್ಗೆ ಮಾನವೀಯತೆ, ಅನುಕಂಪದ ಗುಣಗಳನ್ನು ಹೊಂದಿರುವ, ಮನದಾಳದಲ್ಲಿ ಮೂಡುವ ಆರ್ದ್ರ ಭಾವಗಳಿಗೆ ಅಕ್ಷರ ರೂಪ ನೀಡುವ ಸಾಹಿತಿಯಾಗಿ ಓದುಗರ ಮನಸ್ಸನ್ನು ಸೆಳೆದಿರುವ ವಿಜಯಲಕ್ಷ್ಮಿ ಬಾಳೇಕುಂದ್ರಿಯವರು ಹುಟ್ಟಿದ್ದು 1950 ರ ಆಗಸ್ಟ್ 6ರಂದು ಬೆಳಗಾವಿಯಲ್ಲಿ. ತಂದೆ ಈಶ್ವರಪ್ಪ ಗುರುಸಿದ್ಧಪ್ಪ ಬಾಳೇಕುಂದ್ರಿ, ತಾಯಿ ಸಿದ್ದವ್ವ. ತಂದೆ ಮುಂಬಯಿ ವಿಶ್ವವಿದ್ಯಾಲಯದಿಂದ ಪಶುವೈದ್ಯಕೀಯದಲ್ಲಿ ಚಿನ್ನದ ಪದಕದೊಡನೆ ಪದವಿ ಪಡೆದಿದ್ದಲ್ಲದೆ ವೈಸ್ರಾಯ್ರವರಿಂದ ಪ್ರಶಸ್ತಿ ಪಡೆದ ಪ್ರತಿಭಾನ್ವಿತರು. ತಾಯಿಯ ತಂದೆ ರಾವಬಹದ್ದೂರ್ ವೈಜನಾಥ ಅನಗೋಳ್ರವರು ಬೆಳಗಾವಿಯ ಕೆ.ಎಲ್.ಇ. ಸೊಸೈಟಿಯ ಸಂಸ್ಥಾಪಕರಲ್ಲೊಬ್ಬರು, ಸುಶಿಕ್ಷಿತ, ಸುಸಂಸ್ಕೃತ ಮನೆತನ. ಪ್ರಾರಂಭಿಕ ಶಿಕ್ಷಣ ...
READ MORE