ಬುದ್ಧಿಮಾಂದ್ಯತೆ ವಾಸಿಯಾಗಲು ಯಕ್ಷಣಿ, ಔಷಧ, ಟಾನಿಕ್ಗಳು ವ್ಯರ್ಥ ಎಂಬುದನ್ನು ತಡವಾಗಿ ಕಂಡುಕೊಳ್ಳುವ ಮೊದಲು ಮಗುವಿಗೆ ಇರುವ ಬುದ್ಧಿಯ ಮಟ್ಯವನ್ನು ಪೋಷಕರು ಅರಿಯಬೇಕಿದೆ ಎನ್ನುತ್ತಾರೆ ಇಲ್ಲಿ ಲೇಖಕರು.
ಮಕ್ಕಳಿಗೆ ಯಾವಾಗ? ಹೇಗೆ? ಸೂಕ್ತ ತರಬೇತಿ ಕೊಡಬೇಕು? ಎಂಬುದನ್ನು ಈ ಪುಸ್ತಕ ವಿವರಿಸುತ್ತದೆ. ಮಕ್ಕಳನ್ನು ಸ್ವಾವಲಂಬಿಗಳಾಗಿ ಬದುಕಲು, ಕಲಿಸುವುದು, ನಿಮ್ಮ ಬುದ್ಧಿಮಾಂದ್ಯ ಮಗುವಿನ ಲಾಲನೆ-ಪಾಲನೆಗೆ ಏನು ಮಾಡಬೇಕು? ಹೇಗೆ ಮಾಡಬೇಕು? ಎಂಬ ಉತ್ತರಗಳಿಗೆ ಈ ಪುಸ್ತಕ. ಈ ಕೃತಿ ಈವರೆಗೆ 9 ಮುದ್ರಣ ಕಂಡಿದೆ.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE