ಲೈಂಗಿಕ ಅಸಮತೋಲನ, ಶೀಘ್ರಸ್ಖಲನ, ನಿಮಿರು ದೌರ್ಬಲ್ಯ ಮುಂತಾದವುಗಳಿಗೆ ಆಯುರ್ವೇದದಲ್ಲಿ ಔಷಧೀಯ ಸಸ್ಯಗಳ ಚಿಕಿತ್ಸೆ ಇದೆ. ಅಲ್ಲದೇ ನಿರ್ದಿಷ್ಟ ಆಹಾರ ಪದಾರ್ಥಗಳ ಸೇವನೆಗಳ ಮೂಲಕ ಮತ್ತು ಸುತ್ತಲಿನ ವಾತಾವರಣದ ಆಪ್ಯಾಯತೆಯ ಮೂಲಕ ಲೈಂಗಿಕ ಸಾಮರ್ಥ್ಯವನ್ನು, ಲೈಂಗಿಕ ಸಮಸ್ಯೆಯನ್ನು ನಿಯಂತ್ರಿಸಿಕೊಳ್ಳಬಹುದು. ಈ ವಿಷಯಗಳನ್ನು ಆಯುರ್ವೇದದ ‘ವಾಜೀಕರಣ’ ವಿಭಾಗದಲ್ಲಿ ವಿವರವಾಗಿ ವಿವರಿಸಲಾಗಿದೆ. ಆದರೆ ಜನಸಾಮಾನ್ಯರಿಗೆ ವಾಜೀಕರಣದ ಸಂಕೀರ್ಣ ವಿಷಯಗಳು ಅರ್ಥವಾಗುವುದು ದೂರದ ಮಾತು. ಇಲ್ಲಿ ವಾಜೀಕರಣದ ವಿವರಗಳನ್ನು ಸಾಧ್ಯವಾದಷ್ಟು ಸರಳವಾಗಿ ಸಾಮಾನ್ಯ ಜನರಿಗೆ ಶೀಘ್ರವಾಗಿ ಮುಟ್ಟಿಸುವ ಕೆಲಸವನ್ನು ಡಾ. ವಸುಂಧರಾ ಭೂಪತಿ ಈ ಕೃತಿಯ ಮೂಲಕ ಮಾಡಿದ್ದಾರೆ. ಆಹಾರವು ಲೈಂಗಿಕತೆಯೆ ಮೇಲೆ ಯಾವ ರೀತಿ ಪರಿಣಾವವನ್ನು ಬೀರುತ್ತದೆ ಎಂಬೂದರ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ.
ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...
READ MORE