ಆರೋಗ್ಯ ರಕ್ಷಣೆ ಮಾಡಿಕೊಳ್ಳದವರು ಕುಟುಂಬಕ್ಕೆ ಮತ್ತು ಸುತ್ತಮುತ್ತಲಿನ ಹೊರೆ ಎನ್ನಿಸಿ ಸೌಹಾರ್ದ ಜೀವನ ನಡೆಸುವುದು ಸವಾಲಾಗಿದೆ. ಇಂತಹ ಸವಾಲನ್ನು ಎದುರಿಸಲು ‘ನಾನು ದಾರಿ ತೋರಿಸುವೆ’ ಎನ್ನುತ್ತದೆ ಈ ಕೃತಿ. ಆರೋಗ್ಯದ ಗುಣ ಮಟ್ಟವನ್ನು ಕಾಪಾಡುವಲ್ಲಿ ಈ ಪುಸ್ತಕ ನೆರವಾಗುವುದಲ್ಲದೆ ಆಹಾರ ಎಂಬುದು ಆಹಾರ ಮಾತ್ರವಲ್ಲ ಔಷಧಿಯೂ ಹೌದು ಎಂಬುದನ್ನು ತಿಳಿಸುತ್ತದೆ.
ರಕ್ತ ಭಂಡಾರ, ನೇತ್ರ ಭಂಡಾರದಿಂದ ಹಿಡಿದು ವೈದ್ಯಕೀಯ ತಂತ್ರಜ್ಞಾನದ ನೂತನ ಆವಿಷ್ಕಾರವಾದ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯವರೆಗೂ ಲೇಖನಗಳಿವೆ. ಸುಶ್ರುತ ಮತ್ತು ಸುಶ್ರುತ ಸಂಹಿತೆಯ ಕುರಿತು, ಪಂಚಕರ್ಮ ಚಿಕಿತ್ಸೆಯ ಕುರಿತು ವಿವರಣೆ ಇದೆ. ಮನೆಮದ್ದು ಮತ್ತು ಔಷಧಿಯ ಸಸ್ಯಗಳ ಬಗ್ಗೆ ವಿಸೃತವಾಗಿ ಮಾಹಿತಿ ಇದೆ.
ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...
READ MORE