ಸಕ್ಕರೆ ಕಾಯಿಲೆ ಭಯವೇಕೆ? ಎಂಬುದು ಲೇಖಕ ಪ್ರಕಾಶ ಸಿ. ರಾವ್ ಅವರ ಕೃತಿ. ಮೇಲ್ನೋಟಕ್ಕೆ ಸಕ್ಕರೆ ಕಾಯಿಲೆಯು ಅಷ್ಟೇನೂ ಗಂಭೀರ ಕಾಯಿಲೆ ಎಂದು ಅನ್ನಿಸದಿರದು. ಆದರೆ, ಈ ಕಾಯಿಲೆಯನ್ನು ನಿರ್ಲಕ್ಷಿಸಿದರೆ ಅದರ ನಿಯಂತ್ರಣ ಕಷ್ಟವಾಗುತ್ತದೆ. ಆಗ ಈ ಕಾಯಿಲೆಯ ಗಂಭೀರ ಸ್ವಾರೂಪ ವ್ಯಕ್ತವಾಗುತ್ತದೆ. ಅದರ ಪರಿಣಾಮಗಳು ನಿಯಂತ್ರಣಕ್ಕೆ ಒಳಗಾಗುವುದಿಲ್ಲ. ದೈನಂದಿನ ಜೀವನ ಶೈಲಿಯು ಈ ಕಾಯಿಲೆ ಹೆಚ್ಚಳಕ್ಕೆ ಕಾರಣವಗಿದೆ. ಈ ಕಾಯಿಲೆ ಕುರಿತ ವೈಜ್ಞಾನಿಕ-ವೈದ್ಯಕೀಯ ಸರಳ ಮಾಹಿತಿಯನ್ನು ಒಳಗೊಂಡ ಕೃತಿ ಇದು.
ಲೇಖಕ ಪ್ರಕಾಶ್ ಸಿ ರಾವ್ ಅವರು ಬೆಂಗಳುರಿನ ಯಶವಂತಪುರದಲ್ಲಿ ಖಾಸಗಿ ವೈದ್ಯಕೀಯ ವೃತ್ತಿಯಲ್ಲಿ ತೊಡಗಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ನಿಮ್ಹಾನ್ಸ್ನಲ್ಲಿ ಮಾನಸಿಕ ರೋಗದ ಬಗ್ಗೆ ವಿಶೇಷ ತರಬೇತಿ ಪಡೆದಿದ್ದಾರೆ. ಈ ಮಧ್ಯೆ, ಸೌದಿ ಅರೇಬಿಯಾದ ಸರಕಾರಿ ಆಸ್ಪತ್ರೆಯಲ್ಲಿ ಐದು ವರ್ಷ ಕೆಲಸ ಮಾಡಿದ್ದರು. ಇವರಿಗೆ ವಿಜ್ಞಾನ, ಸಾಹಿತ್ಯ ಹಾಗೂ ಸಮಾಜ ಸೇವೆಯಲ್ಲಿ ಆಸಕ್ತಿ. ತಮ್ಮ ವೃತಿಯಲ್ಲಿ ಬಿಡುವು ಮಾಡಿಕೊಂಡು ಹಲವಾರು ಸಂಘಟನೆಗಳಲ್ಲಿ ಪದಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ರೇಡಿಯೋ, ಟಿ. ವಿ.ಗಳಲ್ಲಿ ಆರೋಗ್ಯ ವಿಷಯಗಳ ಮೇಲೆ ಕಾರ್ಯಕ್ರಮ ನೀಡಿದ್ದಾರೆ. ದೈನಿಕ ಹಾಗೂ ವಾರಪತ್ರಿಕೆಗಳಲ್ಲಿ ನೂರಾರು ಆರೋಗ್ಯ ಲೇಖನಗಳನ್ನು ಬರೆದಿದ್ದಾರೆ. ಕೃತಿಗಳು: ಜನಾರೋಗ್ಯದ ...
READ MORE