’ಆರೋಗ್ಯ ತರಂಗ’ ಪುಸ್ತಕದಲ್ಲಿ ಒಟ್ಟು 25 ಲೇಖನಗಳಿವೆ. ಜನಸಾಮಾನ್ಯರಿಗೆ ಅಗತ್ಯವಾಗಿ ಬೇಕಾದ ವೈದ್ಯಕೀಯ ಲೋಕದ ಮಾಹಿತಿಗಳನ್ನು ಇಲ್ಲಿ ಕೊಡಲಾಗಿದೆ. ಅಪಘಾತ ಅಥವಾ ಆಕಸ್ಮಿಕ ಅವಘಡಗಳಲ್ಲಿ ಪ್ರಥಮ ಸಹಾಯದ ಮಹತ್ವ, ನಿತ್ಯವೂ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಬಳಸುವ ಸೊಳ್ಳೆ ನಿವಾರಕಗಳ ಕುರಿತು ಪ್ರಯೋಗಾಲಯಗಳ ಬೆಚ್ಚಿಬೀಳಿಸುವ ವರದಿಯ ಕುರಿತ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ.
ಪುಟ್ಟ ಕಂದಮ್ಮಗಳಿಗೆ ಕಾಟ ಕೊಡುವ ಕಿವಿ ಸೋರುವಿಕೆ, ನ್ಯೂಮೋನಿಯ, ನವಜಾತ ಶಿಶುಗಳಿಗೆ ಕಾಂಗರೂ ಚಿಕಿತ್ಸೆಯ ಮಹತ್ವ, ಎದೆಹಾಲಿನ ಮಹತ್ವವನ್ನು ಸಾರುತ್ತಲೇ ವಿಜಯಪುರ ಜಿಲ್ಲೆಯಲ್ಲಿ ತಲೆದೋರಿದ ರಿಕ್ಸೆಟ್ಸೆಯಾದಂಥ ಅಪರೂಪದ ಕಾಯಿಲೆಗಳ ಕುರಿತು ಸಮಗ್ರ ಮಾಹಿತಿಯ ಕುರಿತ ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ. ದೈಹಿಕ ಆರೋಗ್ಯವಷ್ಟೇ ಅಲ್ಲ ಮಾನಸಿಕ ಆರೋಗ್ಯದ ಮಹತ್ವವನ್ನು ಇಲ್ಲಿರುವ ಲೇಖನಗಳು ವಿವರಿಸುತ್ತದೆ.
ಲೇಖಕ, ಕವಿ ಹಾಗೂ ವೈದ್ಯರಾದ ಡಾ. ಕರವೀರಪ್ರಭು ಕ್ಯಾಲಕೊಂಡ ಅವರು (ಶಸ್ತ್ರಚಿಕಿತ್ಸರು ಹಾಗೂ ಮಕ್ಕಳ ತಜ್ಞರು) ಬಾಗಲಕೋಟೆ ಜಿಲ್ಲೆಯ ಬಾದಾಮಿಯವರು. ‘ನಲವತ್ತರ ಅಂಚಿನಲ್ಲಿ’, ದೃಢ ಸಂಕಲ್ಪ, ಆರೋಗ್ಯಕ್ಕೆ ಕಾಯಕಲ್ಪ, ಹಾಡು ಹೇಳುವೆ ಕೇಳೆ ಗುಬ್ಬಚ್ಚಿ- ಹೀಗೆ 40 ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. 2016ರಲ್ಲಿ ಸರಕಾರಿ ವೃತ್ತಿಯಿಂದ ನಿವೃತ್ತಿ ಪಡೆದಿದ್ದಾರೆ. ಪ್ರಶಸ್ತಿ-ಗೌರವಗಳು: ಗ್ರಾಮೀಣ ಸೇವೆಗಾಗಿ ಡಾ.ಬಿ.ಸಿ.ರಾಯ್ ಪ್ರತಿಷ್ಠಿತ ಪ್ರಶಸ್ತಿ, ಕರ್ನಾಟಕ ರಾಜ್ಯ ವೈದ್ಯ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತಿನ ಕಾವ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ಸಮಗ್ರ ಸಾಹಿತ್ಯ ಕ್ಕಾಗಿ ಅಗ್ನಿವೇಷ ಸಾಹಿತ್ಯ ಪ್ರಶಸ್ತಿ,, ಬೆಸ್ಟ್ ಐ ಸಿ ಡಿ ಎಸ್ ಮೆಡಿಕಲ್ ಆಫಿಸರ್ ಆಫ್ ...
READ MORE