ಮೃತ ಸಂಜೀವಿನಿ- ಲೇಖಕ ತೀರ್ಥರಾಮ ವಳಲಂಬೆ ಅವರ ಕೃತಿ. ಇಂದಿನ ಬಹುತೇಕ ಕಾಯಿಲೆಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಔಷಧಿಗಳಿಲ್ಲ. ಆಧುನಿಕ ವೈದ್ಯಕೀಯ ಪದ್ಧತಿ ಈ ಬಗ್ಗೆ ಸಂಶೋಧನೆ ನಡೆಸುತ್ತಲೇ ಇದೆ. ಆದರೆ, ಪುರಾತನ ಋಷಿಮುನಿಗಳು ಮಾತ್ರ ಕಾಯಿಲೆ ಇಲ್ಲದೇ ಜೀವನ ನಡೆಸುತ್ತಿದ್ದರು. ಸರಳವಾಗಿ ನೂರಾರು ವರ್ಷ ಜೀವಿಸುತ್ತಿದ್ದರು. ಇದಕ್ಕೆ ಅಲೌಕಿಕ ಕಾರಣಗಳಿದ್ದವು ಎಂತಲ್ಲ. ಅವರ ಸರಳ, ಸಹಜ, ಉನ್ನತ ವಿಚಾರಗಳು ಕಾರಣವಾಗಿದ್ದವು. ಮಾತ್ರವಲ್ಲ; ಅತ್ಯಂತ ಪರಿಣಾಮಕಾರಿಯಾದ ಕೆಲವು ಚಿಕಿತ್ಸಾ ವಿಧಾನಗಳಿದ್ದವು. ಈ ಬಗ್ಗೆ ಸುಲಭ ಸೂತ್ರಗಳ ವಿವರಗಳನ್ನು ಈ ಕೃತಿ ಒಳಗೊಂಡಿದೆ.
ತೀರ್ಥರಾಮ ವಳಲಂಬೆ ಅವರು ಚಿಂತಕರು.ತತ್ವಜ್ಞಾನ, ಅಧ್ಯಾತ್ಮ ಇವರ ಆಸಕ್ತಿಯ ಕ್ಷೇತ್ರಗಳು. ದೇಶ-ಕಾಲ-ಬದುಕು-ದೇವರು, ಧ್ಯಾನ, ಪುನರ್ಜನ್ಮ ಮತ್ತು ಪುರುಷಾರ್ಥ, ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆ, ಇಪ್ಪತ್ತೆಂಟು ಹಣತೆಗಳು, ವಿಚಾರವಾದ, ವಿಜ್ಞಾನ, ಅಧ್ಯಾತ್ಮ, ಮೃತ ಸಂಜೀವಿನಿ, ಅಜಬಿರು -ಇವು ಪ್ರಮುಖ ಕೃತಿಗಳು. ...
READ MORE