‘ಕೆಮ್ಮಿನ ಬೇರುಗಳು’ ಸ.ಜ. ನಾಗಲೋಟಮಠ ಅವರ ಅಧ್ಯಯನ ಕೃತಿಯಾಗಿದೆ. ಆರ್.ಎಲ್. ನರಸಿಂಹಯ್ಯ ಸ್ಮಾರಕ ಗ್ರಂಥಮಾಲೆ -11 ಅಡಿಯಲ್ಲಿ ಪ್ರಕಟಗೊಂಡಿರುತ್ತದೆ. ವೈದ್ಯಕೀಯ ನೆಲೆಯಿಂದ ಶೋಧಿಸಲ್ಪಟ್ಟಿರುವ ಈ ಕೃತಿಯಲ್ಲಿ ಕೆಮ್ಮಿನ ವಿವಿಧ ಪ್ರಕಾರಗಳನ್ನು ಕಾಣಬಹುದಾಗಿದೆ. ಹಾಗೂ ಅದರಿಂದ ಆಗುವಂತಹ ವಿಕಾರಗಳನ್ನು ಭಿನ್ನವಾದ ಉದಾಹರಣೆಗಳ ಮೂಲಕ ವಿವರಿಸಿದ್ದಾರೆ. ಕೆಮ್ಮು, ಸೀನು, ಕೆಮ್ಮಿನ ಪ್ರಕಾರಗಳು, ಮೂಗಿನೊಳಗೊಂದು ನಲ್ಲಿ, ಮೂಗಿನಲ್ಲಿ ಕೀವು ತುಂಬಿದ ಕಂಡಿಕೆಗಳು, ಧ್ವನಿಪೆಟ್ಟಿಗೆಯಲ್ಲಿ ಬಿರುಕು, ಶ್ವಾಸನಾಳ ಸೇರಿದ ಕೋಡಗ, ಗಾಳಿಯೊಳಗಿನಿಂದ ಮೈಯಲ್ಲಿ ಹೊಕ್ಕ ಗುದ್ದವ್ವ, ಶ್ವಾಸನಾಳದಲ್ಲೊಂದು ಸ್ಕ್ರೂಮೊಳೆ, ಶ್ವಾಸನಾಳದ ಬೆಂಕಿ ಪುಪ್ಪಸಕ್ಕೆ ಹರಡಿತು, ಉರಿಯುತ್ತಿರುವ ಪುಷ್ಪಸ, ಪುಪ್ಪುಸದಲ್ಲಿ ಕೀವು ತುಂಬಿದ ಕೊಳವೆಗಳು, ಕಫದಲ್ಲಿ ಹಲ್ಲಿ ಮರಿಗಳು, ಬಾಲಕರಲ್ಲಿ ಕ್ಷಯಂ ವಯಸ್ಕರಲ್ಲಿ ಕ್ಷಯ, ರಕ್ತಕಾರುವ ಪ್ರಪ್ರಸ, ಬಿರಿತ (ಛಿದ್ರ) ಮಹಾ ಅಪಧಮನಿಯ ಊತ (ಉಬ್ಬುವಿಕೆ), ಶ್ವಾಸನಾಳದಲ್ಲಿ ಸೇರಿದ ಏಡಿ, ಎದೆಗೂಡಿನೊಳಗೊಂದು ನೀರಿನ ಸೆಲೆ, ಪುಪ್ಪುಸದಲ್ಲೊಂದು ಬರಸಿನ ಚಂಡು ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡಿದೆ.
ವೈದ್ಯಕೀಯ ಹಾಗೂ ವೈಜ್ಞಾನಿಕ ಬರೆಹಗಳಲ್ಲಿ ಡಾ. ಎಸ್.ಜಿ. ನಾಗಲೋಟಿಮಠ ಹೆಸರು ಚಿರಪರಿಚಿತ. ಮೂಲತಃ ಬಾಗಲಕೋಟೆ ಜಿಲ್ಲೆಯವರು. ಇವರು ಜನಿಸಿದ್ದು 1940 ಜುಲೈ 20ರಂದು. ತಂದೆ ಜಂಬಯ್ಯ. ತಾಯಿ ಹಂಪವ್ವ್. ಹುಬ್ಬಳ್ಳಿಯ ಕರ್ನಾಟಕ ವ್ಯದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯ ಪದವೀಧರರು. ಹುಬ್ಬಳ್ಳಿಯ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ನಂತರ ಕಿಮ್ಸ್ ನಿರ್ದೇಶಕರೂ ಹಾಗೂ ಕರ್ನಾಟಕ ವಿಜ್ಞಾನ ಪರಿಷತ್ತು ಮಾಜಿ ಅಧ್ಯಕ್ಷರೂ ಆಗಿದ್ದರು. ಕೃತಿಗಳು: ಮಾನವ ದೇಹದ ಮಿಲಿಟರಿ ಪಡೆ, ವೈದ್ಯಕೀಯ ಪ್ರಯೋಗಾಲಯ, ಸರ್ವಜ್ಞ ವಚನಗಳಲ್ಲಿ ಆರೋಗ್ಯ, ಪ್ಲಾಸ್ಟಿಕ್ ಸರ್ಜರಿ, ಪರಿಸರ ಮಾಲಿನ್ಯ, ವೈದ್ಯಕೀಯ ವಿಶ್ವಕೋಶ. ಪ್ರಶಸ್ತಿ- ಪುರಸ್ಕಾರಗಳು: ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ...
READ MORE