ಡಾ.ವಸುಂಧರಾ ಭೂಪತಿ ಅವರ ಕೃತಿ ‘ಟೀನೇಜ್ ತಲ್ಲಣ’. ಹದಿಹರೆಯದ ಮಕ್ಕಳ ಜೊತೆ ಮಾತನಾಡುವುದು ಹೇಗೆ ಎನ್ನುವುದೇ ಪಾಲಕರಿಗೆ ಒತ್ತಡವಾಗುತ್ತದೆ..ಇಂತಹ ಸಂದರ್ಭಗಳಲ್ಲಿ ಪಾಲಕರಿಗೆ ಹಾಗೂ ಮಕ್ಕಳಿಗೆ ಪೂರಕವಾದಂತೆ ಇರುವ ಕೃತಿಯಿದು. ಯೌವನಾವಸ್ಥೆಗೆ ದಾಟುವ ‘ಅಡೋಲಸೆಂಟ್’ ಸಮಸ್ಯೆಗಳು ಕೂಡ ಹಲವು. ಅವುಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನು ಸೊಗಸಾಗಿ ಕಟ್ಟಿಕೊಟ್ಟ ಕೃತಿ ‘ಟೀನೇಜ್ ತಲ್ಲಣ’.ದೈಹಿಕ ಬೆಳವಣಿಗೆ, ಹದಿಹರೆಯದ ಹುಡುಗಿಯ ಆರೈಕೆ, ತುಸ್ರಾವದ ತೊಂದರೆ, ಮಾನಸಿಕ ಬೆಳವಣಿಗೆ, ಲೈಂಗಿಕತೆ, ಜೀವನ ಕೌಶಲದ ಕುರಿತು ಈ ಕೃತಿ ಮಾತನಾಡುತ್ತದೆ. ಸೌಂದರ್ಯ ಕಾಪಾಡಿಕೊಳ್ಳುವ ಅಮೂಲ್ಯ ಸಲಹೆಗಳು ಇಲ್ಲಿವೆ. ತ್ವಚೆ, ಕೇಶ, ದಂತ, ಕಣ್ಣಿನ ಸೌಂದರ್ಯವನ್ನು ಹೇಗೆ ವೃದ್ಧಿಸಿಕೊಳ್ಳಬೇಕು ಎಂಬ ವಿಷಯವಾಗಿ ಕಿವಿಮಾತುಗಳೂ ಇವೆ. ಮೊಡವೆಗಳನ್ನು ಹೇಗೆ ನಿಯಂತ್ರಿಸಬೇಕು, ಬಾಯಿ ದುರ್ಗಂಧವನ್ನು ತಡೆಗಟ್ಟುವ ದಾರಿ ಯಾವುದು ಎಂಬುದರ ಮಾಹಿತಿಯೂ ಇದೆ. ಎನ್.ಎಸ್. ಲೀಲಾ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ. ‘ಓಡುವ ಮನಸ್ಸಿಗೆ ಬೇಡಿ ಹಾಕಿ, ಆಯಾಯಾ ಕಾಲಕ್ಕೆ ವೈಜ್ಞಾನಿಕ ಹಿನ್ನೆಲೆ ಬಳಸಿಕೊಂಡು, ನಡೆ-ನುಡಿಗಳಲ್ಲಿ ಕಡಿವಾಣ ಹಾಕಿ ಬದುಕುವ ಮಾರ್ಗ ತೋರಿಸಿದ್ದಾರೆ. ಸುಂದರ ಸಮಾಜಕ್ಕೆ ಬುನಾದಿ ಹಾಕುವ ವೈದ್ಯೆ ಡಾ. ವಸುಂಧರಾ ಭೂಪತಿ ಅವರಿಗೆ ಅಭಿನಂದನೆಗಳು ಎಂಬುದಾಗಿ ಎನ್.ಎಸ್. ಲೀಲಾ ಮುನ್ನುಡಿಯಲ್ಲಿ ಹೇಳಿದ್ದಾರೆ
ಡಾ. ವಸುಂಧರಾ ಭೂಪತಿ ಕರ್ನಾಟಕದ ರಾಯಚೂರಿನಲ್ಲಿ 1962 ರ ಜೂನ್ 5 ರಂದು ಜನಿಸಿದರು. ಇವರು ಬರೆದಿರುವ ವಿಜ್ಞಾನ ಪ್ರಥಮ ಚಿಕಿತ್ಸೆ, ಶುಚಿತ್ವ, ಆರೋಗ್ಯ-ಆರೈಕೆ ಲೇಖನಗಳು ವಾರಪತ್ರಿಕೆ ಹಾಗೂ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ವಸುಂದರಾ ಭೂಪತಿಯವರು ವೈದ್ಯಕೀಯ ಸಾಹಿತ್ಯ ಮಾಲೆ, ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಾಸಪತ್ರಿಕೆ ‘ಬಾಲ ವಿಜ್ಞಾನ’, ಆರೋಗ್ಯ ಅನುರಾಗ ಮಾಸಪತ್ರಿಕೆ, ಆಯುರ್ವೇದ ಮತ್ತು ಯೋಗ ಮಾಸಪತ್ರಿಕೆ, ವಿಜ್ಞಾನ ಲೋಕ ತ್ರೈಮಾಸಿಕ ಪತ್ರಿಕೆ ಹಾಗೂ ಆರೋಗ್ಯ ವಿಜ್ಞಾನ ತ್ರೈಮಾಸಿಕ ಪತ್ರಿಕೆಗಳ ಸಂಪಾದಕ ಮಂಡಳಿಯ ಸದಸ್ಯರಾಗಿದ್ದಾರೆ. ಮತ್ತು ವೈದ್ಯ ಲೋಕ ಮಾಸಪತ್ರಿಕೆಯ ಸಂಪಾದಕರಾಗಿ ...
READ MORE