ಮುಪ್ಪಿಗೆ ಹೆಜ್ಜೆ ಇಟ್ಟಾಗೆಲ್ಲ ಒಂದು ರೀತಿಯ ಅಭದ್ರತೆ ಕಾಡಲು ಶುರುವಾಗುತ್ತದೆ. ಅಲ್ಲಿ ಹಿರಿಯರಿಗೆ ಸಿಗುತ್ತಿದ್ದ ಗೌರವ ಪ್ರೀತ್ಯಾದರ ಇಂದು ಎಲ್ಲೋ ಕಳೆದು ಹೋದ ಭಾವ. ವಯೋವೃದ್ಧರಿಗೆ ತಾವು ಅಸಹಾಯಕರು, ಇನ್ನೊಬ್ಬರಿಗೆ ಹೊರೆ, ಕೂಳಿಗೆ ದಂಡ ಎಂಬಂತೆ ನೋಡುವ ಕಣ್ಣುಗಳು ಮತ್ತಷ್ಟು ಘಾಸಿಯನ್ನುಂಟು ಮಾಡುತ್ತದೆ. ಇವೆಲ್ಲವನ್ನು ಪರಿಗಣಿಸಿ ವೃದ್ಧರನ್ನು ತಾತ್ಸಾರ ಮಾಡದೆ ಹೇಗೆ ನೋಡಿಕೊಳ್ಳಬೇಕೆಂಬ ಸಲಹೆ ಸೂಚನೆಗಳನ್ನು ಲೇಖಕರು ಇಲ್ಲಿ ನೀಡಿದ್ದಾರೆ. ಅಂದಿನ ಕಾಲದ ಮಿತಿಯಲ್ಲಿ ನಮ್ಮನ್ನು ಸಾಕಿ ಬೆಳೆಸಿದವರೆಂಬ ಮನೋಭಾವನೆ ಬರುವಂತೆ ಮಾರ್ಗದರ್ಶನ ನೀಡುವ ಪುಸ್ತಕ ಇದಾಗಿದೆ. ಅಲ್ಲದೆ, ಮಾನಸಿಕವಾಗಿ ಕುಗ್ಗುವ ವೃದ್ಧರಿಗೆ ಸಮರ್ಥವಾಗಿ ಟೀಕೆ, ಅಭದ್ರತೆಯನ್ನು ನಿಭಾಯಿಸುವ ಸುಮಾರ್ಗವನ್ನು ಇಲ್ಲಿ ಕಾಣಬಹುದು. ವೃದ್ಧರ ಮನ ಗೆಲ್ಲುವುದೂ ಒಂದು ಸಾಧನೆ. ಈ ಪುಟ್ಟ ಪುಸ್ತಕದಲ್ಲಿ ಹಿರಿದಾದ ಸಂದೇಶವನ್ನು ಪ್ರಶ್ನೋತ್ತರ ರೂಪದಲ್ಲಿ ಸಂಗ್ರಹಿಸಿ ನೀಡಲಾಗಿದೆ.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE