‘ತರಕಾರಿಗಳಲ್ಲಡಗಿದೆ ಔಷದ’ ಕಾಡುವ ಕಾಯಿಲೆಗಳಿಗೆ ತರಕಾರಿಯೇ ಮದ್ದು. ಡಾ.ಕೆ.ಪೂರ್ಣಿಮಾ ಕೋಡೂರು ಅವರ ಕೃತಿ. ಔಷಧಿ ತಿನ್ನುವುದೆಂದರೆ ಕೆಲವರಿಗೆ ಇಷ್ಟವಾಗುವುದಿಲ್ಲ. ಅದು ಕಹಿ, ಕಷ್ಟ ಇತ್ಯಾದಿ ಕಾರಣಗಳನ್ನು ಔಷದಿ ಸೇವಿಸಲಾಗದ ಹೆಚ್ಚಿನವರು ಕೊಡುತ್ತಾರೆ. ಇಂತಹವರಿಗೆಂದೇ ಆಯುರ್ವೇದೀಯ ವೈದ್ಯಶಾಸ್ತ್ರ ಪದ್ಧತಿ ಅನೇಕ ಸುಲಭದ ಔಷಧಿಗಳನ್ನು ಸೂಚಿಸುತ್ತದೆ. ಅದರಲ್ಲಿ ನಾವು ದಿನನಿತ್ಯ ತಿನ್ನುವ ತರಕಾರಿ, ಹಣ್ಣು ಹಂಪಲುಗಳು ಕೂಡಾ ಒಂದು. ಅಂದರೆ ಆರೋಗ್ಯ ಕಾಪಾಡಿಕೊಳ್ಳಬೇಕು, ರೋಗಗಳಿಂದ ದೂರವಿರಬೇಕೆಂದರೆ ನಾವು ಹೆಚ್ಚೆಚ್ಚು ತರಕಾರಿ ತಿನ್ನಬೇಕೆಂದು ಆಯುರ್ವೇದ ವೈದ್ಯಶಾಸ್ತ್ರ ಹೇಳುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಆಯುರ್ವೇದ ವೈದ್ಯರಾಗಿ ಮತ್ತು ವೈದ್ಯ ಸಾಹಿತಿಯಾಗಿ ಖ್ಯಾತಿ ಗಳಿಸಿರುವ ಡಾ.ಕೆ. ಪೂರ್ಣಿಮಾ ಕೋಡೂರು ಅವರು ತರಕಾರಿಗಳಲ್ಲಡಗಿದೆ ಔಷಧ ಎನ್ನುವ ಎಲ್ಲರಿಗೂ ಅತ್ಯಪಯುಕ್ತವಾಗಬಲ್ಲ ಈ ಪುಸ್ತಕವನ್ನು ಬರೆದಿದ್ದಾರೆ.
ಆಯುರ್ವೇದ ವೈದ್ಯರು ಮತ್ತು ವೈದ್ಯ ಸಾಹಿತಿಯೂ ಆಗಿರುವ ಡಾ.ಕೆ.ಪೂರ್ಣಿಮಾ ಕೋಡೂರು ಅವರು ಆಯುರ್ವೇದವನ್ನು ಪ್ರಚುರ ಪಡಿಸಬೇಕು ಹಾಗೂ ಸರಳವಾಗಿ ಈ ಬಗ್ಗೆ ಕನ್ನಡದಲ್ಲಿ ಜನರಿಗೆ ತಿಳಿಸಬೇಕು ಎನ್ನುವ ಉದ್ದೇಶದಿಂದ ಈವರೆಗೆ ಪ್ರಜಾವಾಣಿ, ವಿಜಯ ಕರ್ನಾಟಕ, ವಿಜಯ ಟೈಮ್ಸ್, ತರಂಗ, ಪ್ರಿಯಾಂಕ, ಗೃಹಶೋಭಾ ಸೇರಿದಂತೆ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಬರೆದ ಲೇಖನಗಳ ಸಂಖ್ಯೆ 300ನ್ನೂ ಮೀರುತ್ತದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೋಡೂರು ಗ್ರಾಮದಲ್ಲಿ ‘ಆವಿ ಆಯುರ್ವೇದಿಕ್ ಹೆಲ್ತ್ ಹೋಮ್’ ಎನ್ನುವ ಆಯುರ್ವೇದಿಕ್ ಕ್ಲಿನಿಕ್ನ್ನು ನಡೆಸುತ್ತಿರುವ ಇವರು ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಸೇರಿದಂತೆ ಹಲವು ಸಮಾಜ ...
READ MORE