ಪವಾಡ ಬಯಲು ಕಾರ್ಯಕ್ರಮ ಖ್ಯಾತಿಯ ಹುಲಿಕಲ್ ನಟರಾಜ್ ಅವರು ಬರೆದ ಕೃತಿ-ಅಂಗೈಯಲ್ಲಿ ಆರೋಗ್ಯ. ಆಹಾರ ಪದ್ಧತಿಯಲ್ಲಿ ಸಮತೋಲನ ಸಾಧಿಸಿದರೆ ಉತ್ತಮ ಆರೋಗ್ಯ ಪಡೆಯಬಹುದು. ಎಲ್ಲ ರೋಗಗಳಿಗೂ ಮೂಲ ಜೀವನಶೈಲಿ ಅಥವಾ ನಮ್ಮ ಆಹಾರ ಪದ್ಧತಿ. ಕುರುಕುಲು ತಿಂಡಿ ಸೇವಿಸುವ, ಹಸಿವಿಲ್ಲದಿದ್ದರೂ ಆಹಾರ ಸೇವಿಸುವುದರಿಂದ ಅನಾರೋಗ್ವವೇ ಹೆಚ್ಚು ಎಂಬುದು ಈ ಕೃತಿಯ ಸಂದೇಶ.
ಹುಲಿಕಲ್ ನಟರಾಜ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನವರು. ಪವಾಡ ಬಯಲು ಕಾರ್ಯಕ್ರಮದ ಮೂ;ಲಕ ಜನಸಾಮಾನ್ಯರಲ್ಲಿಯ ಮೂಢನಂಬಿಕೆಗಳ ನಿರ್ಮೂಲನೆಗಾಗಿ ತಮ್ಮ ವ್ಯಕ್ತಿಗತ ನೆಲೆಯಲ್ಲಿ ಹೊರಾಟವನ್ನೇ ಆರಂಭಿಸಿದವರು. ವೈಜ್ಞಾನಿಕ ತಳಹದಿಯ ಸಂಸ್ಥೆ-ಸಂಘಟನೆಗಳೊಂದಿಗೆ ಸೇರಿ ಸಾಮಾಜಿಕ ವೈಜ್ಞಾನಿಕತೆಯ ಬಲವರ್ಧನೆಗೆ ಶ್ರಮಿಸುತ್ತಿದ್ದು, ಇವರ ಈ ಸೇವೆಗಾಗಿ ರಾಷ್ಟ್ರ ಪ್ರಶಸ್ತಿಯೂ ದೊರಕಿದೆ. ಹುಲಿಕಲ್ ನಟರಾಜ್ ನೀವೂ, ಆರೋಗ್ಯದತ್ತ ನಮ್ಮ ಪಯಣ, ಮನಸೇಕೆ ಹೀಗೆ, ನಿಮ್ಮ ಯಶಸ್ಸಿಗೆ ನೀವೇ ರೂವಾರಿ, ನಿಮ್ಮ ಖುಷಿ ನಿಮ್ಮ ಕೈಯಲ್ಲಿ, ಅಂಗೈಯಲ್ಲಿ ಆರೋಗ್ಯ, ಜೀವ ಕೊಡುವ ಅಮೃತ ಬಿಂದು, ಇದೂ ಸಾಧ್ಯ, ನೀವೂ ಮಾಡಿ ಪವಾಡ, ಭಾಗ-1, ನೀವೂ ಂಆಡಿ ...
READ MORE