ಡಾ. ಪಿ.ಎಸ್. ಶಂಕರ್ ಅವರ ಕೃತಿ-ಹೃದಯ ರೋಗ ತಡೆಗಟ್ಟಿ. ಶಾರೀರಕ ರಚನೆಯಲ್ಲಿ ಪ್ರತಿ ಅಂಗವೂ ಮುಖ್ಯವಾದದ್ದು. ಅದರಲ್ಲೂ ಮಿದುಳು ಹಾಗೂ ಹೃದಯದ ಸ್ಥಾನ ಹಾಗೂ ಮಹತ್ವವವನ್ನು ಯಾರೂ ಅಲ್ಲಗಳಿಯಲಾರರು. ಯಾವುದೇ ಅಂಗದಲ್ಲಿ ಸ್ವಲ್ಪ ನ್ಯೂನತೆ ಕಂಡು ಬಂದರೆ ಅದರ ಚಿಕಿತ್ಸೆಗೆ ಕಾಲಾವಕಾಶ ಇರುತ್ತದೆ. ಆದರೆ, ಹೃದಯದ ಕೆಲಸದಲ್ಲಿ ಸ್ವಲ್ಪವೂ ಹೆಚ್ಚು ಕಡಿಮೆಯಾದರೆ ತತ್ ಕ್ಷಣವೇ ಚಿಕಿತ್ಸೆ ಅಗತ್ಯ. ಏಕೆಂದರೆ, ಪ್ರತಿ ಅಂಗಕ್ಕೂ ಹೃದಯವು ಶುದ್ಧ ರಕ್ತವನ್ನುಪೂರೈಸಲೇ ಬೇಕು. ಈ ಅಂಗಕ್ಕೆ ವಿರಾಮ ಎಂಬುದಿಲ್ಲ. ಹೀಗಾಗಿ, ಹೃದಯದ ಆರೋಗ್ಯಕಾರಿ ಕಾರ್ಯಗಳಿಗೆ ಎಂದಿಗೂ ತಡೆಯಾಗದಂತೆ ಎಚ್ಚರವಹಿಸಿದಷ್ಟೂ ಕಡಿಮೆಯೆ! ಈ ಹಿನ್ನೆಲೆಯಲ್ಲಿ ಮಾಹಿತಿ ಹಾಗೂ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಎಚ್ಚರಿಕೆ ನೀಡಿರುವ ಕೃತಿ ಇದು.
ವೃತ್ತಿಯಲ್ಲಿ ವೈದ್ಯರಾಗಿ ವೈದ್ಯ ಸಾಹಿತಿಯಾಗಿ ಪ್ರಸಿದ್ಧರಾಗಿರುವ ಡಾ.ಪಿ.ಎಸ್.ಶಂಕರ್ ಅವರು 1936 ಜನವರಿ 1ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಹಲಗೇರಿಯಲ್ಲಿ ಜನಿಸಿದರು. ಹುಟ್ಟೂರು ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮೈಸೂರು ಮತ್ತು ದೆಹಲಿಯಲ್ಲಿ ವೈದ್ಯಕೀಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಲಬುರ್ಗಿಯ ಎಂ.ಆರ್. ಮೆಡಿಕಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ವೃದ್ಧಾಪ್ಯದಲ್ಲಿನ ಕಾಯಿಲೆಗಳು, ಹೃದಯ ಜೋಪಾನ, ಕ್ಯಾನ್ಸರ್, ಹೃದಯ ರೋಗ ತಡೆಗಟ್ಟಿ, ಡಾ. ವಿಕ್ರಂ ಸಾರಾಭಾಯ್, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ರಾಕ್ ಫೆಲ್ಲರ್ ಸ್ಕಾಲರ್ ಇನ್ ರೆಸಿಡೆನ್ಸ ಗೌರವ, ಭಾರತ ಸರ್ಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆಯ ...
READ MORE