ಮನಸ್ಸು ನಮ್ಮ ಯಶಸ್ಸು ಮತ್ತು ವಿಫಲತೆಗಳಿಗೆ ಕಾರಣ. ನಮ್ಮ ಆರೋಗ್ಯ, ಅನಾರೋಗ್ಯದ ಮೇಲೂ ಮನಸ್ಸು ಬೀರುವ ಪ್ರಭಾವ ದೊಡ್ಡದು. ಒಂದು ಕ್ಷಣ ಪ್ರಫುಲ್ಲತೆ, ಮತ್ತೊಂದು ಕ್ಷಣ ಪ್ರಕ್ಷುಬ್ಧತೆ, ಇನ್ನೊಂದು ಕ್ಷಣ ಆಸೆ ನಿರಾಸೆ ಹೀಗೆ ತನ್ನನ್ನು ತಾನು ಅಸ್ಥಿರ ಛಾಯೆಯಡಿ ರೂಪುಗೊಳ್ಳುತ್ತಾ ಮುಂದೆ ಸಾಗುವ ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಸಾಧಾರವಾದ ಮಾತಾದರೂ ಅಸಾಧ್ಯವೇನಲ್ಲ. ಚಂಚಲ ಆದರೂ ಅತ್ಯದ್ಭುತ ಸಾಮರ್ಥ್ಯವುಳ್ಳ ಮನಸ್ಸಿನ ಬಗ್ಗೆ ಇಲ್ಲಿ ಲೇಖಕ ಡಾ.ಸಿ.ಆರ್.ಚಂದ್ರಶೇಖರವರು ತಮ್ಮ ಯಥಾಶೈಲಿಯಲ್ಲಿ, ಸುಂದರ ಧಾಟಿಯಲ್ಲಿ ಈ ಕೃತಿಯಲ್ಲಿ ವಿವರಣೆಯನ್ನು ನೀಡಿದ್ದಾರೆ.
ಡಾ. ಸಿ.ಆರ್. ಚಂದ್ರಶೇಖರ್ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ, ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...
READ MORE