‘ದೇಹವೆ ದೇಗುಲ’ ಅಶೋಕ್ ಸೊನ್ನದ್ ಅವರ ವೈದ್ಯಕೀಯ ಕೃತಿಯಾಗಿದೆ. ದೇಹವನ್ನು ಗುಡಿಯಂತೆ ಪೂಜಿಸಿ, ಗೌರವಿಸಿ, ರಕ್ಷಿಸಿ ಎಂಬ ಕಾಳಜಿ ಈ ಪುಸ್ತಕದ ಅತ್ಯಂತವರೆಗೂ ವ್ಯಕ್ತವಾಗಿದೆ. ಡಾಕ್ಟರ್ ಅಶೋಕ ಅವರ ಪ್ರಕಾರ ನಮ್ಮ ಶರೀರ ಒಂದು ಅದ್ಭುತ ಯಂತ್ರ, ದೇವರು ಕೊಟ್ಟ ವರ, ನಮ್ಮ ಎಲ್ಲ ಕೆಲಸ ಕಾರ್ಯಗಳಿಗೆ ಶಕ್ತಿ ನೀಡಿ ನಿರಂತರವಾಗಿ ದುಡಿಯುತ್ತಿರುವ ಯಂತ್ರ. ನಿತ್ಯ ಉಪಯೋಗಿಸುವ ಮಿಕ್ಸಿ, ವಾಷಿಂಗ್ ಮಷೀನ್ ಮುಂತಾದ ಯಂತ್ರಗಳನ್ನು ಹೇಗೆ ನಾಜೂಕಿನಿಂದ ಉಪಯೋಗಿಸುತ್ತೇವೋ ಹಾಗೇ ನಮ್ಮ ಶರೀರವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ವೈದ್ಯರು ಹೇಳುತ್ತಾರೆ.ದೇಹವನ್ನು ಗುಡಿಯಂತೆ ಪೂಜಿಸಿ, ಗೌರವಿಸಿ, ರಕ್ಷಿಸಿ ಎಂಬ ಕಾಳಜಿ ಈ ಪುಸ್ತಕದ ಅತ್ಯಂತವರೆಗೂ ವ್ಯಕ್ತವಾಗಿದೆ. ಡಾಕ್ಟರ್ ಅಶೋಕ ಅವರ ಪ್ರಕಾರ ನಮ್ಮ ಶರೀರ ಒಂದು ಅದ್ಭುತ ಯಂತ್ರ, ದೇವರು ಕೊಟ್ಟ ವರ, ನಮ್ಮ ಎಲ್ಲ ಕೆಲಸ ಕಾರ್ಯಗಳಿಗೆ ಶಕ್ತಿ ನೀಡಿ ನಿರಂತರವಾಗಿ ದುಡಿಯುತ್ತಿರುವ ಯಂತ್ರ. ನಿತ್ಯ ಉಪಯೋಗಿಸುವ ಮಿಕ್ಸಿ , ವಾಷಿಂಗ್ ಮಷೀನ್ ಮುಂತಾದ ಯಂತ್ರಗಳನ್ನು ಹೇಗೆ ನಾಜೂಕಿನಿಂದ ಉಪಯೋಗಿಸುತ್ತೇವೋ ಹಾಗೇ ನಮ್ಮ ಶರೀರವನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ ಎಂದು ಈ ಕೃತಿಯಲ್ಲಿ ಲೇಖಕರು ತಿಳಿಸಿದ್ದಾರೆ.
ಡಾಕ್ಟರ್ ಅಶೋಕ ಸೊನ್ನದ, ಬಾಗಲಕೋಟೆ ಜಿಲ್ಲೆಯ ಮೊಧೋಳ ತಾಲೂಕಿನ ಭಂಟನೂರು ಗ್ರಾಮದವರು. ಅಶೋಕ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಎಂಬಿಬಿಸ್ ಮುಗಿಸಿ, ಅಹ್ಮದಾಬಾದನಲ್ಲಿ ಸ್ನಾತಕೋತ್ತರ ಅಭ್ಯಸಿಸುತ್ತಿರುವಾಗ , ಅಮೇರಿಕಕ್ಕೆ ತೆರೆಳುವ ಅವಕಾಶ ಸಿಕ್ಕಿತು. ಅಮೇರಿಕಾದಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ ಪಡೆದು, ಅಮೆರಿಕನ್ ಅಕಾಡೆಮಿ ಆಫ್ ಕ್ಲಿನಿಕಲ್ ಲಿಪಿಡೋಲಜಿ ಎಂಬ ಒಂದು ವರ್ಷದ ಕೋರ್ಸ್ ಪೂರೈಸಿ, 401 ನೇಯ ಸದಸ್ಯರು ಇವರು ಎಂಬ ಹೆಗ್ಗಳಿಕೆ ಪಡೆದರು. 1974 ರಿಂದ 2010 ವರೆಗೂ ಅಮೆರಿಕಾದಲ್ಲಿ ನಾನಾ ಕಡೆ ಇದ್ದು, ಹಲವು ಪ್ರಸಿದ್ಧ ವೈದ್ಯರೊಡಗೂಡಿ, ನೂರಾರು ಸಫಲ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ. ಇವರ ಸೇವೆ ...
READ MORE