ಜಾತಿ ಪದ್ಧತಿಯ ವಿವಿಧ ಮುಖಗಳನ್ನು ಆಳವಾಗಿ ವಿಶ್ಲೇಷಿಸುವ ಡಾ. ರಾಮಮನೋಹರ ಲೋಹಿಯಾ ಅವರ ಹತ್ತೊಂಬತ್ತು ಲೇಖನಗಳ ಸಂಕಲನ 'ಜಾತಿ ಪದ್ಧತಿ'. ಹಸನ್ ನಯೀಂ ಸುರಕೋಡ ಅನುವಾದಿಸಿದ ಕೃತಿ ಕನ್ನಡ ವೈಚಾರಿಕ ಸಾಹಿತ್ಯಕ್ಕೊಂದು ಅಮೂಲ್ಯ ಸೇರ್ಪಡೆ. ಕಾಗೋಡು ಸತ್ಯಾಗ್ರಹದ ದಿನಗಳಿಂದಲೇ ಲೋಹಿಯಾ ಕರ್ನಾಟಕಕ್ಕೆ ಪರಿಚಿತರು. ಲೋಹಿಯಾ ಅವರ 'ರಾಜಕೀಯದ ಮಧ್ಯೆ ಬಿಡುವು', 'ಇತಿಹಾಸ ಚಕ್ರ’ ಮುಂತಾದ ಕೃತಿಗಳು ತುಂಬಾ ಜನಪ್ರಿಯವಾಗಿದೆ. ಅನಂತಮೂರ್ತಿ, ಲಂಕೇಶ್, ತೇಜಸ್ವಿ ಮುಂತಾದ ಮಹತ್ವದ ಕನ್ನಡ ಬರಹಗಾರರ ಮೇಲೆ ತುಂಬ : ಪ್ರಭಾವ ಬೀರಿರುವ ಲೋಹಿಯಾ ಅವರ ವಿಚಾರಗಳು ಇಂದಿಗೂ ಹಲವಾರು ತರುಣ ಬರಹಗಾರರ ಸ್ಫೂರ್ತಿಯ ಸೆಲೆಗಳಾಗಿವೆ. ಸಮಾಜವಾದಿ ಚಿಂತನೆ ಮತ್ತು ಚಳವಳಿಗಳಿಗೆ ಪ್ರೇರಕ ಶಕಿಯಾಗಿದ ಲೋಹಿಯಾ ಅವರನ್ನು ಕುರಿತು ಕನ್ನಡದಲ್ಲೂ ಅನೇಕ ಬರಹಗಳು ಪ್ರಕಟವಾಗಿವೆ. ಈ ಕೃತಿಯು ಆ ಸಾಲಿಗೆ ಸೇರುವಂತಹದ್ದು.
ಹಸನ್ ನಯೀಂ ಸುರಕೋಡ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅವರು ಇಂಗ್ಲಿಷ್, ಉರ್ದು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪರಿಣಿತರು. ಸಮಾಜವಾದಿ ಚಿಂತನೆಗಳನ್ನು ಕನ್ನಡಕ್ಕೆ ತರುವುದಕ್ಕೆ ಪ್ರಯತ್ನಿಸುತ್ತಿರುವ ಅವರು ಆ ನಿಟ್ಟಿನಲ್ಲಿ ರಾಮಮನೋಹರ ಲೋಹಿಯಾ, ಕಿಶನ್ ಪಟ್ನಾಯಕ್, ಮಧು ಲಿಮೆಯೆ ಮುಂತಾದವರ ಬರಹಗಳನ್ನು ಅನುವಾದಿಸಿದ್ದಾರೆ. ಕೋಮು ಸೌಹಾರ್ದದ ನೆಲೆಗಳನ್ನು ಇಂಗಿಸುವ ಹಲವಾರು ಬರೆಹಗಳು ಇವರಿಂದ ಕನ್ನಡಕ್ಕೆ ಅನುವಾದಗೊಂಡಿವೆ. ಉರ್ದು ಭಾಷೆಯ ಮಹಾಕವಿ ಫೈಜ್ ಅಹಮದ್ ಫೈಜ್ ಅವರ ಕಾವ್ಯ ಮತ್ತು ಬದುಕು, ಸಾದತ್ ಹಸನ್ ಮಂಟೋ ಅವರ ಕಥನ ಕೃತಿಗಳು, ಅಮೃತಾ ...
READ MORE