ವೃತಿ ಜೀವನದಲ್ಲಿ ರೋಗಿಗಳಿಗೆ ಸಾಂತ್ವನ ಮತ್ತು ದೈರ್ಯ ನೀಡುವ ವೈದ್ಯರಿಗೆ ವೈಯುಕ್ತಿಕ ಜೀವನದಲ್ಲಿ ಮರಣವನ್ನು ಭೇಟಿಯಾಗಲು ಬಂದಾಗ ಉಂಟಾಗುವ ಮಾನಸಿಕ ತಳಮಳವನ್ನು ವಿವರಿಸಲಾಗಿದೆ.ಇದು ಅಮೆರಿಕದಲ್ಲಿ ವೈದ್ಯರಾಗಿದ್ದ ಭಾರತೀಯ ಮೂಲದ ಡಾ. ಪೌಲ್ ಕಲಾನಿಧಿ ಅವರ ಆತ್ಮಕತೆ, ವೈದ್ಯ ಧರ್ಮ ಎಂದರೆ ರೋಗಿಗಳನ್ನು ಉಳಿಸುವುದಲ್ಲ, ಸಾವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವಂತೆ ರೋಗಿಗಳಿಗೆ ಮತ್ತು ಅವರ ಸಂಬಂಧಿಗಳಿಗೆ ಮಾರ್ಗದರ್ಶನ ನೀಡುವುದು - ಎಂಬುದು ಇವರ ಧೈಯವಾಗಿತ್ತು .ಅವರು ಶ್ವಾಸಕೋಶದ ಕ್ಯಾನ್ಸರ್ನಿಂದ ಮರಣ ಹೊಂದಿದರು, ರೋಗಿಯಾಗಿ ತಮ್ಮ ಅನುಭವವನ್ನು ಆತ್ಮಚರಿತ್ರೆಯಲ್ಲಿ ಮನಮುಟ್ಟುವಂತೆ ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ
.ಡಾ. ಡಿ.ಸಿ. ನಂಜುಂಡ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಎಂಎಸ್ ಸಿ ಹಾಗೂ ಎಂ.ಎ. ಪಿಎಚ್ ಡಿ-ಇವರ ವಿದ್ಯಾರ್ಹತೆ. ಅಭಿವೃದ್ದಿ ಮಾನವಶಾಸ್ತ್ರ, ಸಮಾಜಶಾಸ್ತ್ರ, ಗ್ರಾಮೀಣ ಮತ್ತು ಬುಡಕಟ್ಟು ಅಧ್ಯಯನ, ಸಾಮಾಜಿಕ ನೀತಿ ಮತ್ತು ವ್ಯವಹಾರ ಇವರ ಪರಿಣಿತ ಕ್ಷೇತ್ರಗಳು. ಕೃತಿಗಳು: ಶಿಕ್ಷಣ, ಅಭಿವೃದ್ಧಿ ಮತ್ತು ರಾಜಕೀಯ ಸಮಕಾಲೀನ ಚರ್ಚೆಗಳು, ಉಸಿರೇ ಗಾಳಿಯಾದಾಗ (ಅನುವಾದಿತ ಕೃತಿ) ...
READ MORE