ಹಿರಿಯ ಕವಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಅನುವಾದಿತ ಕೃತಿ- ಹೆಣ್ಣಿನ ಸ್ಥಾನ-ಮಾನ . ಬಂಗಾಲಿಯ ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ ಜೀವನಚರಿತ್ರೆಯಾಗಿದೆ. ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರು ಸ್ತ್ರೀಯರ ಸ್ಥಾನಮಾನವನ್ನು ಕುರಿತು ಬಂಗಾಲಿಯಲ್ಲಿ ರಚಿಸಿದ ಅನುಪಮ ಕೃತಿಯ ಕನ್ನಡ ರೂಪ “ಹೆಣ್ಣಿನ ಸ್ಥಾನ-ಮಾನ'. ಶರತ್ ಚಂದ್ರ ಅವರು ಪ್ರಪಂಚದ ವಿವಿಧ ಭಾಗಗಳಲ್ಲಿ ನೆಲೆಸಿದ ಮಾನವ ಜನಾಂಗಗಳ ಆಚಾರ ವಿಚಾರಗಳನ್ನು ವಿಶ್ಲೇಷಿಸಿ, ಐತಿಹಾಸಿಕ ಮಹತ್ವದ ಈ ವೈಚಾರಿಕ ಪ್ರಬಂಧವನ್ನು ಸಿದ್ದಪಡಿಸಿದ್ದಾರೆ. ಅವರ ಕಥೆ, ಕಾದಂಬರಿಗಳಲ್ಲಿ ಬರುವ ಪಾತ್ರಗಳನ್ನು ವಿಶ್ಲೇಷಿಸಲು ಈ ಕೃತಿಯು ಮುಖ್ಯ ಆಧಾರಗ್ರಂಥವಾಗಿದೆ. ಸಮಸ್ತ ವಿಶ್ವದ ಮುಖ್ಯವಾಗಿ ಭಾರತೀಯ ಸಮುದಾಯದ, ಬಂಗಾಲದ ಸಂತ್ರಸ್ತ, ದುರದೃಷ್ಟ ಮಹಿಳೆಯರ, ವಿಧವೆಯರ ಸ್ಥಿತಿ-ಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಅಪರೂಪದ ಬರವಣಿಗೆಯಾಗಿದೆ, ಚಿಂತಕರಿಗೆ, ಇತಿಹಾಸಕಾರರಿಗೆ, ಸಮಾಜಶಾಸ್ತ್ರಜ್ಞರಿಗೆ ಶರತ್ ಚಂದ್ರರ ಸಂಪೂರ್ಣ ಸಾಹಿತ್ಯವನ್ನು ವಿಶ್ಲೇಷಿಸುವ ವಿನೂತನ ವಿಧಾನವನ್ನು ತೋರುವ ಕೈಗನ್ನಡಿಯಂತಿದೆ ಈ ಕೃತಿ.
ಕವಿ-ಅನುವಾದಕ-ಅಂಕಣಕಾರರಾಗಿ ಚಿರಪರಿಚಿತರಿರುವ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಜನಿಸಿದ್ದು 1939ರ ನವಂಬರ್ ೩ರಂದು. ಧಾರವಾಡ ಸಮೀಪದ ಯಾದವಾಡ ಎಂಬ ಹಳ್ಳಿಯಲ್ಲಿ ಜನಿಸಿದ ಅವರು ಒಂದೂವರೆ ವರ್ಷದವರಿರುವಾಗಲೇ ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ತಾಯಿಯ ತವರು ಮನೆ ಮನಗುಂಡಿ ಸೇರಿದರು. ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಶಿಕ್ಷಣ ಮುಂದುವರಿಸುವ ದೃಢ ಸಂಕಲ್ಪದಿಂದ ತಾಯಿಯೊಂದಿಗೆ ಮತ್ತೆ ಧಾರವಾಡಕ್ಕೆ ಬಂದ ಅವರು ಹಿಂದೀ ಎಂ.ಎ., ಪಿಎಚ್.ಡಿ. ಪದವಿಗಳನ್ನು ಪಡೆದರು. ಒಂದು ವರ್ಷ ಹೈಸ್ಕೂಲ್ ಶಿಕ್ಷಕ, ಒಂದು ವರ್ಷ ಶಿರಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು, 1966 ರಿಂದ 1999ರ ವರೆಗೆ ಕರ್ನಾಟಕ ...
READ MORE