ಡಾ. ಎನ್ ಗೋಪಾಲಕೃಷ್ಣಅವರು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿರುವ ʼಆರೋಗ್ಯ ಸಂಚಯʼ ಕೃತಿಯು ಆರೋಗ್ಯ ಕುರಿತ ಚಿಂತನೆಗಳ ಪುಸ್ತಕವಾಗಿದೆ. ಡಾ. ವಸುಂಧರಾ ಭೂಪತಿ ಅವರು ಸಂಪಾದಕರು. ಮನುಷ್ಯನ ಜೀವನದಲ್ಲಿ ಆರೋಗ್ಯವೇ ಭಾಗ್ಯ ಎಂಬ ಭಾಗ್ಯ ಪದೇ ಪದೆ ಕೇಳುತ್ತಿರುತ್ತೇವೆ. ಆದರೆ ಆ ಭಾಗ್ಯ ದುಬಾರಿಯಾಗದಿರಲು ಕೆಲವು ಪ್ರಾಥಮಿಕ ಮುನ್ನೆಚ್ಚರಿಕೆಗಳನ್ನು ವಹಿಸುವುದು ಅಗತ್ಯವಿದೆ. ಶುಚಿತ್ವ, ಆಹಾರ ಸೇವನೆಯಲ್ಲಿ ನಿಯಮಿತ ಪದ್ಧತಿ, ಗೃಹೋಪಯೋಗಿ ಬಳಕೆಯ ವಸ್ತುಗಳನ್ನು ಬಳಸುವಾಗ ತೆಗೆದುಕೊಳ್ಳಬೇಕಾದ ಎಚ್ಚರ, ಆಹಾರವನ್ನು ನೀಡುವ, ತಯಾರಿಸುವ ಸಂದರ್ಭಗಳಲ್ಲಿ ವಹಿಸಬೇಕಾದ ಸ್ವಚ್ಛತೆಯ ಎಚ್ಚರ, ಶುದ್ಧ ನೀರಿನ ಬಳಕೆ ಹೀಗೆ ಅನುದಿನದ ಬದುಕಿನಲ್ಲಿ ಪ್ರತಿಯೊಬ್ಬರು ಪಾಲಿಸಬೇಕಾದ ಕೆಲವು ಸಾಮಾನ್ಯ ಸಂಗತಿಗಳ ಬಗ್ಗೆ ನಮ್ಮ ಬಹೇತಕ ಜನರಿಗೆ ಅನಾದರವೇ ಹೆಚ್ಚು ಈ ಎಲ್ಲ ಅಂಶಗಳನ್ನು ಮನಗಂಡ ಲೇಖಕರು ಜನಸಾಮಾನ್ಯರಿಗೆ ಆರೋಗ್ಯ ರಕ್ಷಣೆಯ ಕುರಿತು ಸಾಮಾನ್ಯ ತಿಳಿವಳಿಕೆಯನ್ನು ನೀಡುವ ರೀತಿ ಈ ಕೃತಿಯಲ್ಲಿ ವಿವರಿಸಿದೆ ಎಂದು ಅನುವಾದಕರು ಹೇಳಿದ್ದಾರೆ.
ವಿಜ್ಞಾನ ಮತ್ತು ಆರೋಗ್ಯ ಸಾಹಿತ್ಯ ಕ್ಷೇತ್ರದಲ್ಲಿ ಜನಪ್ರಿಯತೆ ಗಳಿಸಿದವರಲ್ಲಿ ಪ್ರಮುಖರು ಎನ್. ಗೋಪಾಲಕೃಷ್ಣ. ಅನುವಾದದಲ್ಲೂ ಕೃಷಿ ಸಾಧಿಸಿದ್ದಾರೆ. ಆರೋಗ್ಯ ಸಂವಹನ ಕ್ಷೇತ್ರದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಕನ್ನಡದಲ್ಲಿ ‘ಸಂಕ್ಷಿಪ್ತ ಕೃಷಿ-ಪರಿಸರ ಸಚಿತ್ರ ಶಬ್ದಾರ್ಥ ಕೋಶ, ನಗುವಿನಿಂದ ಆರೋಗ್ಯವೃದ್ಧಿ, ಆರೋಗ್ಯ ಮಾಹಿತಿಯ ಸದುಪಯೋಗ, ಮೂಡ್ ಸರಿಪಡಿಸುವ ಥೆರಪಿ, ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ?, ಆಪ್ತಸಲಹೆ, ಆಧುನಿಕ ಜೀವನದಲ್ಲಿ ಆರೋಗ್ಯ ಸಂರಕ್ಷಣೆ ಹೇಗೆ? ಆರೋಗ್ಯ ದರ್ಶನ, ಮಿದುಳಿನ ಶಕ್ತಿ, ವಿಶ್ವದಿನ ವಿಶೇಷ ದಿನ, ಆರೋಗ್ಯ ಜ್ಞಾನ ನಿಮಗೇಕೆ ಬೇಕು? ನಿವೃತ್ತ ಜೀವನಕ್ಕೆ ಸಿದ್ಧತೆ ಹೇಗೆ?, ನೋವಿನ ಮಂಡಿ, ಆತ್ಮಹತ್ಯೆ: ...
READ MORE