ದೇಶಪ್ರೇಮವೋ? ದೇಶದ್ರೋಹವೋ ಕೃತಿಯು 2016ರಲ್ಲಿ ದೇಶದೆಲ್ಲೆಡೆ ಧ್ವನಿಸಿದ ದೇಶಪ್ರೇಮ, ದೇಶದ್ರೋಹದ ಪರಿಕಲ್ಪನೆಗಳ ಬಗ್ಗೆ ಯಾವುದು ದೇಶಪ್ರೇಮ ಯಾವುದು ದೇಶದ್ರೋಹ? ಎಂಬುದರ ಕುರಿತು ಚಚಿಸುವ ಜಿ.ಸಂಪತ್, ಹರ್ಷ ಮಂದೇರ್, ಸಿದ್ಧಾರ್ಥ ವರದರಾಜನ್, ರಾಜದೀಪ್ ಸರದೇಸಾಯಿ, ಅಡ್ಮಿರಲ್ ರಾಮದಾಸ್ ಹಾಗೂ ಇತರರ ಬರಹಗಳನ್ನು ಒಳಗೊಂಡಿರುವ ಕೃತಿಯಾಗಿದೆ. ಇದರಲ್ಲಿ ಕನ್ಹಯ್ಯ ಕುಮಾರ್ ಅವರು ಮಾಡಿದ ಭಾಷಣಗಳು, ವಿವಿಧ ಲೇಖಕರು ದೇಶಪ್ರೇಮ, ದೇಶದ್ರೋಹದ ಕುರಿತು ಚರ್ಚೆ ನಡೆಸಿದ ಲೇಖನಗಳಿವೆ.
ವಿಶ್ವ ಕುಂದಾಪುರ ಅವರು ವಿದ್ಯಾರ್ಥಿ ದಿನಗಳಿಂದಲೂ ಪ್ರಗತಿಪರ ಆಂದೋಲನದಲ್ಲಿ ಗುರುತಿಸಿಕೊಂಡವರು. ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅವರು 'ದಿ ಹಿಂದೂ’ ಇಂಗ್ಲಿಷ್ ದೈನಿಕದ ಪ್ರಧಾನ ವರದಿಗಾರರಾಗಿ ಕೋಲಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ’ಸಮತೆಯ ನಾಡಿನ ಉದಯಕ್ಕಾಗಿ’ (ಹರಿಕಿಷನ್ ಸಿಂಗ್ ಸುರ್ಜಿತ್), ವಿಮೋಚನೆಯ ಸಮರದಲ್ಲಿ (ಮೇಜರ್ ಜೈಪಾಲ್ ಸಿಂಗ್), ’ಮಾವೋವಾದ: ಒಂದು ಎಡಪಂಥೀಯ ವಿಶ್ಲೇಷಣೆ' (ವಿವಿಧ ಲೇಖಕರು), `ಚಿತ್ತಗಾಂಗ್ ಶಸ್ತ್ರಾಗಾರ ದಾಳಿ' (ಸುಜೂದ್ ರಾಮ್ ) ಅವರ ಕೆಲವು ಪ್ರಮುಖ ಅನುವಾದ ಕೃತಿಗಳು. ಅವರ “ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿ’ ಪ್ರಬಂಧವು ಕನ್ನಡದಲ್ಲಿ ಅಪರೂಪದ ಕೃತಿ. `ವಿಮೋಚನೆಯ ಸಮರ’ದಲ್ಲಿ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2009ನೇ ಸಾಲಿನ ಅತ್ಯುತ್ತಮ ...
READ MORE