ಅಮೆರಿಕ ಕೇವಲ ಒಂದು ದೇಶವಲ್ಲ. ಉಳಿದ ದೇಶಗಳದ್ದೇ ಒಂದು ತೂಕವಾದರೆ ಅದರದ್ದೇ ಒಂದು ತೂಕ. ಹಾಗಾಗಿಯೇ ಅದು ವಿಶ್ವದ ಇತರರ ಪಾಲಿಗೆ ದೊಡ್ಡಣ್ಣ. ಅಷ್ಟೇ ಆಗಿದ್ದಿದ್ದರೆ ಚಿಂತೆ ಇರುತ್ತಿರಲಿಲ್ಲ ಆದರೆ ಅಮೆರಿಕ ದುಷ್ಟತೆಯನ್ನೂ ಮೈಗೂಡಿಸಿಕೊಂಡಿದೆ, ಅದು ಇತರರನ್ನು ಕಾಡುತ್ತಿದೆ ಎಂಬುದು ’ಅಮೆರಿಕನಿಜಂ’ ಕೃತಿಯ ಮೂಲ ಲೇಖಕರಾದ ರಾಣಿ ಶಿವಶಂಕರಶರ್ಮ ಅವರ ಅಭಿಪ್ರಾಯ. ರಾಜಕೀಯ ತತ್ವಶಾಸ್ತ್ರದ ಫಸಲು ಎಂದೇ ಕೃತಿ ಬಿಂಬಿತ.
’ಅಮೆರಿಕನಿಜಂ’ ಎಂದರೆ ಜಾಗತೀಕರಣ, ಏಕಸ್ವಾಮ್ಯತೆ, ಏಕರೂಪತೆ ಎಂಬ ಆತಂಕ ಲೇಖಕರದ್ದು. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯವನ್ನುಅಮೆರಿಕನಿಜಂ ಭ್ರಷ್ಟಗೊಳಿಸುತ್ತಿರುವುದನ್ನು ಕೃತಿಕಾರರು ಗಮನಿಸಿದ್ದಾರೆ.
ಯುರೋಪಿಯನಿಜಂ ಮತ್ತು ಅಮೆರಿಕನಿಜಂ ನಡುವಿನ ವ್ಯತ್ಯಾಸವನ್ನು ಹೇಳುತ್ತಾ, ಯುರೋಪಿಯನಿಜಂ ಹೊಚ್ಚ ಹೊಸ ಸರಕುಗಳಿಂದ ವ್ಯಾಪಾರ ಮಾಡಿದರೆ, ಅಮೆರಿಕನಿಜಂ, ಹೊಚ್ಚ ಹೊಸ ಆಲೋಚನೆಗಳನ್ನೇ ಸರಕುಗಳಾಗಿ ಚಲಾಚವಣೆಗೆ ತರುತ್ತಿದೆ ಎನ್ನುತ್ತಾರೆ. ಭಾರತೀಯತೆಯೂ ಅಮೆರಿಕನಿಜಂ ಜೊತೆಗೆ ಸೇರಿಕೊಂಡ ಪರಿಯನ್ನುಅವರು ಆಸಕ್ತಿಕರವಾಗಿ ಮಂಡಿಸಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...
READ MORE