ಹಿರಿಯ ಲೇಖಕ ಡಾ. ಎಸ್.ಎನ್. ಬಾಲಗಂಗಾಧರ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ಲೇಖಕ ಪ್ರೊ. ರಾಜಾರಾಮ ಹೆಗಡೆ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಬೌದ್ಧಿಕ ದಾಸ್ಯದಲ್ಲಿ ಭಾರತ. ಭಾರತವು ವಿಶ್ವದಲ್ಲೇ ಅತ್ಯುನ್ನತ ವಿಚಾರ-ಚಿಂತನೆಗಳಿದ್ದರೂ ಅವುಗಳು ವ್ಯಾಪಕ ಪ್ರಚಾರವಿಲ್ಲ. ಅಷ್ಟಕ್ಕೂ, ನಮ್ಮ ಸಂಸ್ಕೃತಿಯ ಬಗ್ಗೆ ಆಳವಾದ ಜ್ಞಾನವಿಲ್ಲ. ಇದ್ದರೂ, ಅದನ್ನು ಹೇಗೆ ವ್ಯಾಪಕಗೊಳಿಸಬೇಕು ಎಂಬುದರ ಮಾಹಿತಿ ಕೊರತೆ ಹೀಗೆ ಹತ್ತು ಹಲವು ಅಡೆ-ತಡೆಗಳ ಪೈಕಿ ಬಹುತೇಕ ಅಡೆತಡೆಗಳು ಸ್ವಯಂಕೃತ ಅಪರಾಧಗಳ ಸ್ವರೂಪವನ್ನು ಹೋಲುತ್ತವೆ.
ಬ್ರಿಟಿಷರು ಉತ್ತಮರು, ಪ್ರಗತಿಪರರು ಎಂದು ತಿಳಿದು, ಅವರ ಸಂಸ್ಕೃತಿಯನ್ನು ಸ್ವೀಕರಿಸುವ ಧಾವಂತದಲ್ಲಿ ಭಾರತೀಯ ಸಂಸ್ಕೃತಿಯನ್ನೇ ಕಡೆಗಣಿಸುತ್ತಿರುವುದರ ಪರಿಣಾಮ ಭಾರತದ ಬೌದ್ಧಿಕತೆಯು ದಾಸ್ಯದಲ್ಲಿ ನರಳುತ್ತಿದೆ. ಇಂತಹ ಸಂಗತಿಗಳ ಚಿಂತನೆಗಳು ಈ ಕೃತಿಯಲ್ಲಿ ಹೆಪ್ಪುಗಟ್ಟಿವೆ.
ಡಾ. ರಾಜಾರಾಮ ಹೆಗಡೆ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಐನಕೈನವರು. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹೊನ್ನೆಬಾಗ ಎಂಬ ಹಳ್ಳಿಯಲ್ಲಿ ವಾಸವಾಗಿದ್ದಾರೆ. ಪ್ರಾಕ್ತನಶಾಸ್ತ್ರ ಹಾಗೂ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯನ್ನು ವಿಶೇಷ ಅಧ್ಯಯನವನ್ನಾಗಿ ಆಯ್ಕೆಮಾಡಿಕೊಂಡು ತಮ್ಮ ಸ್ನಾತಕೋತ್ತರ ಪದವಿಯನ್ನು ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಪಡೆದಿರುತ್ತಾರೆ. 1979ರಲ್ಲಿ ‘ಶುಂಗ ಕಾಲದ ಕಲೆ : ಸಾಂಸ್ಕರತಿಕ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟೊರೇಟ್ ಪದವಿಯನ್ನು ಪಡೆದರು. ಹಂಪಿ, ಇನಾಂಗಾವ್ ಹಾಗೂ ಸನ್ನತಿ ನೆಲೆಗಳ ಉತ್ಖನನದಲ್ಲಿ ಭಾಗವಹಿಸಿದ್ದಾರೆ. 1988ರಿಂದ 2019ರವರೆಗೆ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ...
READ MORE