‘ಉಲಮಾ ಹೋರಾಟಗಾರರು’ ಕೃತಿಯು ಕೆ. ವೈ ಅಬ್ದುಲ್ ಹಮೀದ್ ಅವರ ಅನುವಾದಿತ ಕೃತಿಯಾಗಿದೆ. ಅರ್ಶದ್ ಮುಹಮ್ಮದ್ ನದ್ವಿ ಈ ಕೃತಿಯ ಮೂಲ ಲೇಖಕರಾಗಿದ್ದಾರೆ. ವಿವಿಧ ಕಾಲಗಳಲ್ಲಿದ್ದ ಪ್ರವಾದಿಗಳು ಆಯಾ ಕಾಲದ ತಮ್ಮ ಜನರು ಎದುರಿಸುತ್ತಿದ್ದ ಮುಖ್ಯ ಸಮಸ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದರು ಎಂಬುದನ್ನು ಲೇಖಕ ಇಲ್ಲಿ ವಿಶ್ಲೇಷಿಸಿದ್ದಾರೆ.
ಬಹುದೇವಾರಾಧನೆ, ಆರ್ಥಿಕ ಶೋಷಣೆ, ರಾಜಕೀಯ ದಾಸ್ಯತನ, ಲೈಂಗಿಕ ಅರಾಜಕತೆ, ಪುರೋಹಿತಶಾಹಿ ಮೊದಲಾದ ಸಮಸ್ಯೆಗಳಿಗೆ ಅವರು ಇಸ್ಲಾಮಿನ ಮೂಲಕ ಪರಿಹಾರ ಕಂಡುಕೊಂಡರು. ಪೂರ್ವಿಕರಾದ ವಿದ್ವಾಂಸರು ಈ ಮಾದರಿಗಳನ್ನು ಎತ್ತಿಹಿಡಿದಿದ್ದರು. ನೂರಾರು ವರ್ಷಗಳ ಕಾಲ ಕೇರಳದ ಕರಾವಳಿಯು ವಸಾಹತುಶಾಹಿ ಶಕ್ತಿಗಳ ಕೈಗಳಲ್ಲಿ ಅಮರಿಕಂಡಾಗ ಅಂದಿನ ವೀರವಿದ್ವಾಂಸರು ತಾವು ಕಳೆದುಕೊಂಡಿರುವ ಹೋರಾಟ ಸಂಸ್ಕೃತಿಯ ಪರಂಪರೆಯನ್ನು ಮರಳಿ ಪಡೆಯುವ ಕುರಿತಂತೆ ಆಲೋಚಿಸಬೇಕಾದ ಅಗತ್ಯವಿದೆ. ಹೀಗೆ ಈ ಕೃತಿಯು ಅನೇಕ ವಿಚಾರಗಳನ್ನು, ಆಗು ಹೋಗುಗಳನ್ನು ಕಟ್ಟಿಕೊಡುತ್ತದೆ.
ಲೇಖಕ ಕೆ. ವೈ ಅಬ್ದುಲ್ ಹಮೀದ್ ಅವರು ಅನುವಾದಕರು. ಕೃತಿಗಳು : ಸತ್ಯವಿಶ್ವಾಸಿಯ ದಿನಚರಿ (ಅನುವಾದಿತ ಕೃತಿ), ಅನ್ಪಾಲ್ (ಅನುವಾದಿತ ಕೃತಿ), ಉಲಮಾ ಹೋರಾಟಗಾರರು ವೈಚಾರಿಕ ಲೇಖನಗಳು), ಮುಸ್ಲಿಮ್ ಸಬಲೀಕರಣ (ಧಾರ್ಮಿಕ ಲೇಖನಗಳು) ...
READ MORE