ಆಂಧ್ರಪ್ರದೇಶದ ಹಿರಿಯ ಐ.ಎ.ಎಸ್. ಅಧಿಕಾರಿಯಾದ ವಿದ್ಯಾಸಾಗರ್ ತೆಲುಗು ಸಾಹಿತ್ಯದ ಪ್ರಬುದ್ಧ ಲೇಖಕರು. ಮಾನವೀಯ ಅಂತಃಕರಣವುಳ್ಳವರಾಗಿ ಸಾರ್ವಜನಿಕ ಆಡಳಿತದಲ್ಲಿ ದಮನಿತರ ದನಿಯಾಗಿ ದುಡಿಯುತ್ತಿರುವ ವಿಶಿಷ್ಟ ವಕ್ತಿತ್ವ ಹೊಂದಿರುವವರು. ಅಧ್ಯಯನವೇ ಅವರ ಸಂಸ್ಕಾರ, ಬದುಕಿನಲ್ಲಿ ಸಾತ್ವಿಕತೆ ಉಂಡು ಬರಹದಲ್ಲಿ ಸೃಜನಶೀಲತೆ ಗಳಿಸಿ ಕೊಂಡವರು. ಗಿರಿಜನರ ಕಲ್ಯಾಣ ಕಾರ್ಯಗಳಲ್ಲಿ ದುಡಿಯುತ್ತಿರುವಾಗ ಅವರ ಸುತ್ತಮುತ್ತಲಿನ ಪರಿಸರ, ಅನುಭವ ಶಿಕ್ಷಣಗಳಿಗೆ ಮಾರುಹೋದವರು. ಅವುಗಳೆಲ್ಲದರ ಸತ್ಸಲ ಮೊತ್ತವಾಗಿ ಬಂದಿರುವ 'ಭದ್ರಾಚಲಂ ಮನ್ಸೆಂ ಕಥಲು' ಕೃತಿ ತೆಲುಗು ಸಾಹಿತ್ಯದಲ್ಲೊಂದು ಮನ್ವಂತರವನ್ನೇ ತೆರೆದಿಟ್ಟಿದೆ. ವಿದ್ಯಾಸಾಗರ್ ಕಾಡಿನವರ ಸಂಸ್ಕೃತಿಯನ್ನು ನಾಡಿನವರಿಗೆ ಪರಿಚಯಿಸುವ ಪ್ರಯತ್ನದಲ್ಲಿ ಯಶಸ್ವಿಯನ್ನು ಸಾಧಿಸಿದ್ದಾರೆ. ಈ ಕೃತಿಯ ಕನ್ನಡ ಅನುವಾದವೇ ’ಕೂಗಿರದ ಪ್ರತಿಧ್ವನಿ’.
ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ಸ.ರಘುನಾಥ,ಕಥೆ, ಕಾವ್ಯ, ವಿಮರ್ಶೆ, ಅಂಕಣಬರಹ, ಅನುವಾದ, ಜಾನಪದ ಸಾಹಿತ್ಯ ಸಂಗ್ರಹ,ಮುಂತಾದ ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದವರು. ಸುಮಾರು 40ಕ್ಕೂ ಹೆಚ್ಚಿನ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ ಸ. ರಘುನಾಥ ಅವರು ಸಮಾಜಸೇವೆಯಲ್ಲಿಯೂ ಹೆಚ್ಚಾಗಿ ತೊಡಗಿಸಿಕೊಂಡವರು. 1995 ರಿಂದ ’ನಮ್ಮ ಮಕ್ಕಳು’ ಎಂಬ ಸಂಸ್ಥೆಯ ಮೂಲಕ ಸಾಮಾಜಿಕ ಕಾರ್ಯ: ಭಿಕ್ಷುಕ, ಅನಾಥ, ವೃದ್ಧರಿಗೆ, ಅಂಗವಿಕಲರಿಗೆ ಶೈಕ್ಷಣಿಕ ಹಾಗು ಉಚಿತ ವೈದ್ಯಕೀಯ ನೆರವು. 1994 ರಿಂದ 2014 ರವರೆಗೆ ಗಾಯಗೊಂಡ ಪ್ರಾಣಿ - ಪಕ್ಷಿಗಳ ಆರೈಕೆ. 2005ರಿಂದ ನಾಟಿ ಔಷಧ ತಯಾರಿಕೆ, ಉಚಿತ ...
READ MORE