ದೇವರ ಅಸ್ತಿತ್ವ ಮತ್ತು ಮಾನವನ ಅಂತಃಶಕ್ತಿಯ ಸಂಘರ್ಷಕ್ಕೆ ವ್ಯಕ್ತಿತ್ವ ವಿಕಸನದ ಅಂಶಗಳನ್ನು ಸೇರಿಸಿ ಸಸ್ಪೆನ್ಸ್ ಕಾದಂಬರಿಯಲ್ಲಿ ಓದುಗರಿಗೆ ಬೇಸರವಾಗದ ರೀತಿ ಹೆಣೆದಿದ್ದಾರೆ ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ. ದೇವರಿಗೇ ಸವಾಲು ಹಾಕುವ ಕತಾ ನಾಯಕ ಕಲ್ಕಿ ಗೆಲ್ಲುತ್ತಾನಾ? ಸೋಲುತ್ತಾನಾ? ಅವ ದೇವರಿಗೆ ಹಾಕಿದ ಸವಾಲಾದರೂ ಏನು? ತಾನು ಗೆಲ್ಲಲು ಬುದ್ಧಿವಂತೆ ಸೌಪರ್ಣಿಕಾಳನ್ನು ಎಂತಹ ತಪ್ಪು ಮಾಡಲು ಪ್ರೇರೇಪಿಸಿದ? ಎಂಬ ಕುತೂಹಲಕಾರಿ ಪ್ರಶ್ನೆಗಳು ಕಾದಂಬರಿಯನ್ನು ಓದಿಸಿಕೊಂಡು ಹೋಗುತ್ತದೆ. ಈ ಕೃತಿಯನ್ನು ಕನ್ನಡೀಕರಿಸಿದ್ದಾರೆ ಸಂಡೂರು ವೆಂಕಟೇಶ್.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE