ಲೇಖಕ ಇರ್ಫಾನ್ ಹಬೀಬ್ ಅವರ ಮೂಲಕೃತಿಯನ್ನು ಕನ್ನಡಕ್ಕೆ ಬಿ. ಸುಜ್ಞಾನಮೂರ್ತಿಯವರು ’ಭಾರತ ಚರಿತ್ರೆಯಲ್ಲಿ ರೈತ’ ಎಂಬ ಅನುವಾದದೊಂದಿಗೆ ತಂದಿದ್ದಾರೆ.
ಭಾರತದ ಚರಿತ್ರೆಯಲ್ಲಿ ರೈತ ಹೇಗೆ ಹುಟ್ಟಿದ, ಯಾವ ಯಾವ ದಾರಿಯಲ್ಲಿ ಅವನ ಪಯಣ ಸಾಗಿದೆ, ಜಾತಿಗಳು ಯಾವ ರೀತಿ ಉಂಟಾದವು, ಚರಿತ್ರೆಯಲ್ಲಿ ಎಂತಹ ಪಾತ್ರ ನಿರ್ವಹಿಸಿದವು,
ಭಾರತದ ಚರಿತ್ರೆಯಲ್ಲಿ ಇಲ್ಲಿಯವರೆಗೆ ಅತ್ಯಂತ ಪ್ರಮುಖವಾದ ಘಟನೆಗಳೆಲ್ಲವುಗಳಿಗೆ ರೈತವರ್ಗವೇ ಕೇಂದ್ರಸ್ಥಾನವಾಗಿದೆ. ಅಂದಿನ ಮತ್ತು ಇಂದಿನ ಹಲವು ತೀವ್ರ ಸಮಸ್ಯೆಗಳು ಒಟ್ಟಾರೆ ರೈತವರ್ಗದ ಸಮಸ್ಯೆಗಳೇ ಆಗಿವೆ. ಅಸ್ಪಶ್ಯರ ಹುಟ್ಟು ಬೆಳವಣಿಗೆಗಳೇನು, ಯುರೋಪ್ ರೈತರ ಬೆಳವಣಿಗೆಗೂ ಭಾರತ ದೇಶದ ರೈತರಿಗೂ ವ್ಯತ್ಯಾಸವೇನು, ಭಾರತ ದೇಶದಲ್ಲಿ ರೈತಾಪಿವರ್ಗ ಯಾಕೆ ಸಂಘಟಿತವಾಗದೆ ಹೋಯಿತು. ಮೊದಲಾದ ಪ್ರಶ್ನೆಗಳ ಕಡೆ ದೃಷ್ಟಿ ಹರಿಸುವಂತೆ ಮತ್ತು ಆಲೋಚಿಸುವಂತೆ ಮಾಡುವ ಚಾರಿತ್ರಿಕ ವಿಶ್ಲೇಷಣೆಯನ್ನು ಈ ಪುಸ್ತಕ ನೀಡುತ್ತದೆ.
ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಬಿ. ಸುಜ್ಞಾನಮೂರ್ತಿ ಅವರು ಅನುವಾದ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಯಾರದೀ ಕಾಡು, ಅಸಮರ್ಥನ ಜೀವನಯಾತ್ರೆ, ಬೆಕ್ಕಿನ ಆತ್ಮಕತೆ, ನೇಣುಗಂಬದ ನೆರಳಿನಲ್ಲಿ, ನಮಗೆ ಗೋಡೆಗಳಲ್ಲ, ಜಾತಿವಿನಾಪ, ದಲಿತತತ್ವ, ಪುರುಷ ಅಹಂಕಾರಕ್ಕೆ ಸವಾಲ್, ದಲಿತ ಹೋರಾಟಗಾರ ಅರ್ಯ ಕಾಳಿ, ಚಾರ ಮಾರ್ಗವಿನಾಶ, ಪರಿಯಾರ್ ಜೀವನಚಳವಳಿ, ತಿಗುರಿ ತಿರುಗಿಸು ನೇಗಿಲು ಉಳು, ದಲಿತ ರಾಜಕೀಯ, ಆಕಾಶದೇವರು, ಮುಸತಿ ಅಪರಾಧ-ಶಿಕ್ಷೆ, ಸ್ವಾಭಿಮಾನದ ಮದುವೆಗಳು, ಆಸ್ಪಕೃತ, ತೆಲಂಗಾಣ ಹೋರಾಟ ಆದ ಪ್ರಮುಖ ಅನುವಾದಿತ ಕೃತಿಗಳು. ಯಾರದೀ ಕಾಡು ಕಾದಂಬರಿಗೆ ಮತ್ತು ತೆಲಂಗಾಣ ಹೋರಾಟ ಕೃತಿಗೆ ಕರ್ನಾಟಕ ...
READ MORE