ಆಂಗ್ಲ ಲೇಖಕ ಹೋಸೆ ಒರ್ಟೆಗಾ ಯಿ ಗಾಸೆತ್ ಅವರು ಪತ್ರಿಕೆಗಳಲ್ಲಿ ಬರೆದ ಅಂಕಣಗಳ ಸಂಗ್ರಹ ಕೃತಿ- ‘ದಿ ರಿವೋಲ್ಟ್ ಆಫ್ ದಿ ಮಾಸಸ್’. ಲೇಖಕ ಕೆ.ಎನ್. ವೆಂಕಟಸುಬ್ಬರಾವ್ ಅವರು ‘ಜನಸಮೂಹದ ದಂಗೆ’ ಶೀರ್ಷಿಕೆಯಡಿ ಕನ್ನಡಕ್ಕೆ ಅನುವಾದಿಸಿದ್ದಾರೆ.ಮೂಲ ಸ್ಪ್ಯಾನಿಷ್ ಭಾಷೆಯಲ್ಲಿ ಬರೆದ ಈ ಅಂಕಣ ಬರಹಗಳು 1930 ರಲ್ಲಿ ಇಂಗ್ಲಿಷ್ ರೂಪು ಪಡೆದು ಪ್ರಕಟಗೊಂಡವು. ನಂತರ ವಿವಿಧ ಪ್ರಕಾಶನಗಳು ವಿವಿಧ ಭಾಷೆಗಳಲ್ಲಿ ಪ್ರಕಟಗೊಳಿಸಿದವು. ಸಮಾಜದ ಮೇಲಿನ ಅಧಿಕಾರಗಳನ್ನು ಜನಸಮೂಹಗಳು ಹೇಗೆ ಸ್ವೀಕರಿಸಿ, ಪ್ರತಿಕ್ರಿಯಿಸುತ್ತವೆ ಎಂಬುದು ಇಲ್ಲಿಯ ಎಲ್ಲ ಬರಹಗಳ ಜೀವಾಳ. ಮಾತ್ರವಲ್ಲ; ‘ಮನುಷ್ಯ ಹಾಗೂ ಸಮೂಹ’ ಈ ಎರಡರ ಪರಿಕಲ್ಪನೆಗಳ ಮಧ್ಯೆ ಇರುವ ವ್ಯತ್ಯಾಸಗಳನ್ನು ಸಹ ಗುರುತಿಸುತ್ತವೆ; ಅವುಗಳ ಅನಾಗರಿಕತೆಯನ್ನು ಬಯಲು ಮಾಡುತ್ತವೆ. ಸಮೂಹವು ಯಾವಾಗಲೂ ಉದ್ರಿಕ್ತವಾಗಿಯೇ ಪ್ರತಿಕ್ರಿಯಿಸುತ್ತದೆ ಏಕೆ ...ಎಂಬ ವಿಚಾರಗಳೂ ಸೇರಿದಂತೆ ಸಮೂಹದ ಸ್ವಭಾವ-ಸ್ವರೂಪವನ್ನು ಲೇಖಕರು ತಮ್ಮ ಬರಹಗಳ ಮೂಲಕ ತೋರಿದ್ದಾರೆ.
ರಾಜ್ಯದ ಸಾಂಸ್ಕೃತಿಕ ಮತ್ತು ಪತ್ರಿಕೋದ್ಯಮ ವಲಯಗಳಲ್ಲಿ ಕೆ.ಎನ್.ವಿ. ಎಂದೇ ಪರಿಚಿತರಾಗಿರುವ ಕಳಲೆ ನಾಗರಾಜರಾವ್ ವೆಂಕಟಸುಬ್ಬರಾವ್ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು (ಮೈಸೂರು ವಿಶ್ವವಿದ್ಯಾನಿಲಯ). 1978ರಲ್ಲಿ ಉಪಸಂಪಾದಕರಾಗಿ ಕನ್ನಡ ದೈನಿಕ ಕನ್ನಡ ಪ್ರಭ ಪ್ರವೇಶಿಸಿದರು. ಪತ್ರಿಕೆಯ ಸುದ್ದಿ ಮೇಜು, ಸಾಪ್ತಾಹಿಕ ಪ್ರಭ ಮತ್ತು ಚಿತ್ರಪಭ ವಿಭಾಗಗಳಲ್ಲಿ ಕೆಲಸ ಮಾಡಿದರು. 1993ರಲ್ಲಿ ಹಿರಿಯ ವರದಿಗಾರರಾಗಿ ಇಂಗ್ಲೀಷ್ ದೈನಿಕ ದೈನಿಕ ದಿ ಹಿಂದು (ಬೆಂಗಳೂರು ಆವೃತ್ತಿ) ಸೇರಿದರು. 2011 ರಲ್ಲಿ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕೃತಿಗಳು: ಝೂಲಾಘಾಟ್ (1988), ತಂತ್ರ (2000), ಮೃಗ (2003) ಇಂದ್ರಪ್ರಸ್ಥ (2009) ಹಾಗೂ ಜೂಜು ...
READ MORE