ಓಶೋ ರಜನೀಶ್ ಅವರ ವಿಚಾರಗಳನ್ನು ಬೆ. ಕಾ ಮೂರ್ತೀಶ್ವರಯ್ಯ ಅವರು ವಿವರಿಸಿದ ಕೃತಿ-ಸಂಧ್ಯಾಕಾಲದ ಬೆಳಕಿನಲ್ಲಿ. ಓಶೋ ಅವರು ತಮ್ಮ ಪ್ರಖರ ಅಧ್ಯಾತ್ಮಿಕ ವಿಚಾರಗಳೊಂದಿಗೆ ವಾಸ್ತವವನ್ನು ಹೇಗೆ ಎದುರಿಸಬೇಕು? ಅದಕ್ಕೆ ಬೇಕಾಗುವ ಮಾನಸಿಕ ಸಿದ್ಧತೆ ಹೇಗಿರಬೇಕು? ಇತ್ಯಾದಿ ವಿಷಯಗಳ ಕುರಿತು ತುಂಬಾ ವಿಶ್ವಾಸದಿಂದ ಮಾತನಾಡುವ ಓಶೋ ಅವರ ವಿಚಾರಗಳನ್ನು ಲೇಖಕರು ಸರಳವಾಗಿ ಅನುವಾದಿಸಿದ್ದಾರೆ.
ಬೆ. ಕಾ. ಮೂರ್ತೀಶ್ವರಯ್ಯ ಅವರು ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಬರಗಾಹರರು. ಸಾಮಾಜಿಕ, ರಾಜಕೀಯ, ಆರ್ಥಿಕ, ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ಇವರ 100ಕ್ಕೂ ಹೆಚ್ಚು ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಾದ ಪ್ರಜಾವಾಣಿ ಕನ್ನಡ ಪ್ರಭ, ಮುಂಗಾರು ಸಂಯುಕ್ತ ಕರ್ನಾಟಕ, ಉದಯವಾಣಿ, ಪ್ರಜಾಮತ, ಜನಪದ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ತಮ್ಮ ಪತ್ರಿಕಾ ಲೇಖನಗಳ ಪೈಕಿ ಆಯ್ದ ಲೇಖನಗಳನ್ನು ಅಭಿವ್ಯಕ್ತಿ ಸಂವೇದನೆ ಇತ್ಯಾದಿ, ಅರ್ಥ ಮತ್ತು ವ್ಯಾಪ್ತಿ', 'ಜನತೆ, ಸಮಾಜ ಮತ್ತು ಕಾನೂನು ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಇವರ ಪ್ರಕಟವಾದ ಪುಸ್ತಕಗಳಲ್ಲಿ ’ಅಭಿವ್ಯಕ್ತಿ, ಸಂವೇದನೆ ಇತ್ಯಾದಿ (1985), "ಅರ್ಥ ಮತ್ತು ವ್ಯಾಪ್ತಿ ...
READ MORE