ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ' ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 237ನೇ ಪುಸ್ತಕ ಪಿ.ಎಸ್. ಪುಂಚಿತ್ತಾಯ. ಜಲವರ್ಣ ಮಾಂತ್ರಿಕ ಪಿ.ಎಸ್. ಪುಂಚಿತ್ತಾಯ ಕಾಸರಗೋಡಿನ ಪ್ರಸಿದ್ಧ ಪುಂಡೂರು ಪುಣಿಚಿತ್ತಾಯ ಮನೆತನದ ಪಿ.ಎಸ್. ಪುಂಚಿತ್ತಾಯರು ಖ್ಯಾತ ಜಲವರ್ಣ ಕಲಾವಿದರು. ಅವರು ತಮ್ಮದೇ ಆದ ಕಾಂಚನಗಂಗಾ ಕಲಾಗ್ರಾಮವನ್ನು ಸ್ಥಾಪಿಸಿ ಈ ಪ್ರದೇಶದಲ್ಲಿ ಕಲೆ ಸಂಸ್ಕೃತಿಗಳನ್ನು ಉತ್ತೇಜಿಸಿ ಪೋಷಿಸುತ್ತಿದ್ದಾರೆ.
ರಾಧಾಕೃಷ್ಣ ಕೆ. ಉಳಿಯತ್ತಡ್ಕ (ಜನನ 1958) ಕಾಸರಗೋಡಿನ 'ತುಳುನಾಡು ಟೈಮ್' ದೈನಿಕದ ಸುದ್ದಿ ಸಂಪಾದಕರು. ಅವರು ಸಾಹಿತ್ಯ ರಚನೆ, ಸಂಘಟನಾ ಕಾರ್ಯದಲ್ಲಿ ಸಕ್ರಿಯರಾಗಿರು ವವರು. ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕನ್ನಡ ಲೇಖಕರ ಸಂಘದ ಕಾರ್ಯದರ್ಶಿಯಾಗಿ, ಹಲವು ಸಾಂಸ್ಕೃತಿಕ ಸಂಘಟನೆಗಳ ನಿರ್ದೇಶಕರಾಗಿ, ಸದಸ್ಯರಾಗಿರುವ ರಾಧಾಕೃಷ್ಣ ಉಳಿಯತ್ತಡ್ಕರ ಪ್ರಕಟಿತ ಕೃತಿಗಳು: ಸರಳ ಗೀತೆಗಳು, ಈ ನನ್ನ ಶಬ್ದಗಳು, ನೋವ ಜಿನುಗುವ ಜೀವ, ಬೆಂಕಿ ನುಂಗುವ ಹುಡುಗ, ಹದಿಯರೆಯದ ಹನಿಗಳು, ಮತ್ತು ಅರ್ಧ ಸತ್ಯದ ಬೆಳಕು (ಕವನ ಸಂಕಲನಗಳು); ಕುತ್ಯಾಳ ಸಂಪದ, ನೆಲದ ಧ್ಯಾನ, ಮಧೂರು, ಕಯ್ಯಾರ, ಕಯ್ಯಾರ ...
READ MORE