ಕಾಂತಾವರ ಕನ್ನಡ ಸಂಘವು ಪ್ರಕಟಿಸಿರುವ ನಾಡಿಗೆ ನಮಸ್ಕಾರ ಸರಣಿಯ 96ನೇ ಪುಸ್ತಕವಿದು. ಜಾದೂಲೋಕದಲ್ಲಿ ಗಣನೀಯ ಸಾಧನೆ ಮಾಡಿದ ಪ್ರೊ. ಶಂಕರ್ ಅವರ ಬದುಕು ಮತ್ತು ಸಾಧನೆಯನ್ನು ಈ ಕೃತಿಯು ನೀಡುತ್ತದೆ.
ಮಕ್ಕಳ ಸಾಹಿತಿ ಎಂದೇ ಪ್ರಸಿದ್ಧರಾಗಿರುವ ಪ. ರಾಮಕೃಷ್ಣ ಶಾಸ್ತ್ರಿಯವರು ಹುಟ್ಟಿದ್ದು1953ರ ಜುಲೈ 7ರಂದು. ಊರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು. ತಂದೆ ವೆಂಕಟರಮಣ ಶಾಸ್ತ್ರಿ, ತಾಯಿ ಗುಣವತಿ. ಪ್ರಾರಂಭಿಕ ಶಿಕ್ಷಣ ಮನೆಯಲ್ಲಿಯೇ ಕಲಿತ ಅವರು ನೇರವಾಗಿ ನಾಲ್ಕನೆ ತರಗತಿಗೆ ಸೇರ್ಪಡೆಯಾದರು ಓದಿದ್ದು ಏಳನೆಯ ತರಗತಿಯವರೆಗೆ ಮಾತ್ರ. ಪುತ್ತೂರಿನ ಬಳಿ ಕಬಕ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದ ಅವರ ಕುಟುಂಬ ಸಾಂಸಾರಿಕ ತೊಂದರೆಯಿಂದ ಮಚ್ಚಿನ ಗ್ರಾಮಕ್ಕೆ ವಲಸೆ ಹೋಗಬೇಕಾಯಿತು. ಇದರಿಂದಾಗಿ ಓದಿಗೆ ತಡೆಯುಂಟಾಗಿ ಶಾಲೆ ತೊರೆದರು. ಆನಂತರ ಅವಲಂಭಿಸಿದ್ದು ಕೃಷಿ. ‘ಹಿಮದ ಹುಡುಗಿ’, ‘ಆನೆ ಮತ್ತು ಇರುವೆ’, ‘ಚಿನ್ನದ ಸೇಬು’, ‘ಚಿನ್ನದ ಗರಿ’, ...
READ MORE