ಸಾವಿರಾರು ಏಕವ್ಯಕ್ತಿ ಪ್ರದರ್ಶನ ನೀಡುವ ಮೂಲಕ ಏಕವ್ಯಕ್ತಿ ಯಕ್ಷಗಾನ ಎಂಬ ಹೊಸ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಕಲಾವಿದ ಮಂಟಪ ಪ್ರಭಾಕರ ಉಪಾಧ್ಯರ ಸಾಧನೆಯ ಸಮಗ್ರ ಚಿತ್ರಣವನ್ನು ಕೃತಿಯಲ್ಲಿ ನೀಡಲಾಗಿದೆ. ಅಲ್ಲದೆ ಏಕವ್ಯಕ್ತಿ ಯಕ್ಷಗಾನದ ಸ್ವರೂಪವನ್ನೂ ವಿವರಿಸಲಾಗಿದೆ. ಮಂಟಪ ಪ್ರಭಾಕರ ಉಪಾಧ್ಯ ಅವರ ಬಗ್ಗೆ ಬರೆದಿರುವ ಬರಹಗಳು, ನುಡಿನಮನಗಳು, ಅವರ ಸಂಕ್ಷಿಪ್ತ ಜೀವನಗಾಥೆ ಕೃತಿಯಲ್ಲಿವೆ.
ಯುವ ಬರೆಹಗಾರ, ಬಹುಮುಖ ಪ್ರತಿಭೆ ದೀವಿತ್ ಎಸ್. ಕೋಟ್ಯಾನ್ ಪೆರಾಡಿ ಮೂಲತಃ ಮಂಗಳೂರಿನವರು. ಮಂಗಳೂರು ವಿಶ್ವವಿದ್ಯಾನಿಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಪದವಿ ಪರೀಕ್ಷೆಯಲ್ಲಿ ಪ್ರಥಮ ಬ್ಯಾಂಕ್ ಪಡೆದವರು. ಜತೆಗೆ ಎಂ.ಎ. ಕನ್ನಡ ಪದವಿಯನ್ನೂ ಪಡೆದಿದ್ದಾರೆ. ಪ್ರಸ್ತುತ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ಮಂಗಳೂರು ಇಲ್ಲಿ ಕನ್ನಡ ಉಪನ್ಯಾಸರಾಗಿದ್ದಾರೆ. ಜತೆಗೆ ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರದ ಯಕ್ಷಗಾನ ಗುರುವಾಗಿಯೂ ಕೆಲಸ ಮಾಡುತ್ತಿದ್ದಾರೆ. ಭಾರತದ ಇತಿಹಾಸದಲ್ಲಿ ಉಲ್ಲೇಖವಾದ ಪದ್ವಿನಿ ಪ್ರಕರಣಾಧಾರಿತ 'ಪದ್ವಿನಿ ಪದಗ್ನತಿ' ಎಂಬ ಯಕ್ಷಗಾನ ಪ್ರಸಂಗ ರಚಿಸಿದ್ದಾರೆ. ಯಕ್ಷಗಾನ ಏಕವ್ಯಕ್ತಿ ಪ್ರದರ್ಶನಗಳನ್ನೂ ಕೊಡುತ್ತಾರೆ. ‘ಕವಿಯ ...
READ MORE