ತಮ್ಮ ಗಾಯನದ ಮೂಲಕ ಕನ್ನಡ ಭಾವಗೀತೆಗಳಿಗೆ ವಿಶಿಷ್ಟ-ವಿಭಿನ್ನ ನೆಲೆ ಒದಗಿಸಿಕೊಟ್ಟವರು ಪಿ. ಕಾಳಿಂಗರಾವ್. ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರೂ ಮತ್ತು ಸಂಗೀತ ನಿರ್ದೇಶಕರೂ ಆಗಿದ್ದ ಕಾಳಿಂಗರಾವ್ ಅವರ ಗಾಯನ ಕನ್ನಡ ರಸಿಕರನ್ನು ಸೂರೆಗೊಂಡಿತ್ತು. ಗೀತಗಾಯನ ಅವರ ವಿಶೇಷ ಕ್ಷೇತ್ರ. ಕಾಳಿಂಗರಾವ್ ಅವರ ಜೀವನ ಸಾಧನೆಯನ್ನು ಈ ಪುಸ್ತಕ ನೀಡುತ್ತದೆ. ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯ 131ನೇ ಕೃತಿ.
ಲೇಖಕ, ಗಾಯಕ, ನಾಟಕಕಾರ ಎಚ್. ಎಂ. ನಾಗರಾಜರಾವ್ ಕಲ್ಕಟ್ಟೆ ಪ್ರಸ್ತುತ ಚಿಕ್ಕಮಗಳೂರು ತಾಲ್ಲೂಕು ಕಳಸಾಪುರದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರು. ವಿದ್ಯಾರ್ಥಿ ಜೀವನದಲ್ಲಿ ಇವರು ಕಲಿಕೆಯಲ್ಲಿ ಚಿನ್ನದ ಪದಕಗಳನ್ನು ಗಳಿಸಿದವರು. ಸಾಹಿತ್ಯ, ಸಂಗೀತ, ಅಭಿನಯ, ಸಾಂಸ್ಕೃತಿಕ ಸಂಘಟನೆ, ಸಮಾಜಸೇವೆ, ಧಾರ್ಮಿಕ ಸೇವೆ ಹೀಗೆ ಹಲವು ಕ್ಷೇತ್ರಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅವರ ಸಾಹಿತ್ಯವಿರುವ ನೂರಕ್ಕೂ ಹೆಚ್ಚು ಅಡಕ ಮುದ್ರಿಕೆಗಳು ಲೋಕಾರ್ಪಣೆಗೊಂಡಿವೆ. ಕಾಂತಾವರ ಕನ್ನಡ ಸಂಘವೇ ಪ್ರಕಟಿಸಿದ 'ಕನ್ನಡ ಕೋಗಿಲೆ ಪಿ. ಕಾಳಿಂಗರಾವ್' ಹಾಗೂ ’ಪ್ರಥಮ ಪುಟ’, ’ಬೆಳಕು’ ಪುಸ್ತಕವೂ ಸೇರಿ ಈವರೆಗೆ ಇಪ್ಪತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಆರು ಕೃತಿಗಳನ್ನು ...
READ MORE