ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯ 233 ನೇ ಪುಸ್ತಕ ಪಡಾರು ಮಹಾಬಲೇಶ್ವರ ಭಟ್. ಹಿರಿಯ ಸಾಹಿತಿ, ಜಾನಪದ ಸಂಶೋಧಕ ಪಡಾರು ಮಹಾಬಲೇಶ್ವರ ಭಟ್ ಪಡಾರು ಮಹಾಬಲೇಶ್ವರ ಭಟ್ಟರು ಹವಿಗನ್ನಡ ಸಾಹಿತ್ಯದ ಸಂಶೋಧಕ, ಸ್ವತಃ ಕನ್ನಡ ಮತ್ತು ಹವಿಗನ್ನಡಗಳಲ್ಲಿ ಬರೆಯುವ ಕವಿ ಮತ್ತು ಕತೆಗಾರ. ಅವರ ಕತೆಯೊಂದಕ್ಕೆ (ಮಾರಿಬಲೆ ಬೀಸಿತ್ತು) 1960ರ 'ಪ್ರಜಾವಾಣಿ' ವಾರ್ಷಿಕ ಕಥಾಸ್ಪರ್ಧೆಯ ಪ್ರಥಮ ಬಹುಮಾನ ಬಂದಿದ್ದುದು ಅವರ ಬರವಣಿಗೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಸಾಹಿತ್ಯ ಸಂಶೋಧನೆ, ಬರವಣಿಗೆ, ಕೃಷಿಗಳಲ್ಲಿ ತೊಡಗಿಕೊಂಡಿರುವ ಸಾರ್ಥಕ ಬದುಕು ಅವರದು.
ಕುಮಾರಸ್ವಾಮಿ ತೆಕ್ಕುಂಜ ಅವರು ಇಲೆಕ್ಟಿಕಲ್ ಇಂಜಿನಿಯರಿಂಗ್ ಪದವೀಧರರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಮುಂಬಯಿಯಲ್ಲಿ 'ಫಿಯಟ್ ಅಟೊಮೊಬೈಲ್ ಕಂಪೆನಿ'ಯ ತಾಂತ್ರಿಕ ವಿಭಾಗದಲ್ಲಿ ಮತ್ತು ಐದು ವರ್ಷ ಮಹಾರಾಷ್ಟ್ರದ ನಾಸಿಕದಲ್ಲಿ 'ಮಹೀಂದ್ರ ಮತ್ತು ಮಹೀಂದ್ರ ಕಂಪೆನಿಯಲ್ಲಿ ಕೆಲಸಮಾಡಿ ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿ ನಲ್ಲಿರುವ 'ಜನರಲ್ ಮೋಟರ್ ಟೆಕ್ನಿಕಲ್ ಸೆಂಟರ್'ನಲ್ಲಿ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನೆಲೆ ನಿಂತ ಮೇಲೆ, ಹವಿಗನ್ನಡದ ಬ್ಲೊಗುಚ್ಛ 'ಒಪ್ಪಣ್ಣ. ಕಾಂ'ನಲ್ಲಿ 2011ರಿಂದ ಬರೆಯಲು ಆರಂಭಿಸಿದ್ದು, ಇದೀಗ, ನಿವೃತ್ತಿಯ ಅಂಚಿನಲ್ಲಿರುವ ಸಮಯದಲ್ಲಿ ಕನ್ನಡದಲ್ಲಿಯೂ ಬರೆಯಲು ತೊಡಗಿಸಿಕೊಂಡಿದ್ದಾರೆ. ದೇನೆ. ಕನ್ನಡ ಪೌರಾಣಿಕ ಕಾದಂಬರಿ 'ಮಂಡೋದರಿ' ...
READ MORE