ಸ್ವಸಾಮರ್ಥ್ಯದಿಂದ ಸಾಹಿತ್ಯ ಕೃಷಿ ನಡೆಸಿದವರು ಲಕ್ಷ್ಮಿ ಕುಂಜತ್ತೂರು. ಕರಾವಳಿಯ ಬೋವಿ ಜನಾಂಗದಲ್ಲಿ ಹುಟ್ಟಿ ಬೆಳೆದ ಅವರು ಅಧ್ಯಯನ, ಅಧ್ಯಾಪನದ ನಡುವೆ ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಆಸಕ್ತರಾಗಿದದರು. ಲಕ್ಷ್ಮಿಯವರ ಮೂರು ಕಾದಂಬರಿಗಳು ಪ್ರಕಟವಾಗಿವೆ. ಮೀನುಗಾರಿಕೆಯನ್ನು ನೆಚ್ಚಿಕೊಂಡ ಕರಾವಳಿಯ ಬೋವಿ ಜನಾಂಗದ ಚಿತ್ರಣ ಈ ಕಾದಂಬರಿಗಳಲ್ಲಿದೆ. ಲಕ್ಷ್ಮಿ ಅವರ ಬದುಕು-ಬರೆಹ ಕುರಿತ ಮಾಹಿತಿ ನೀಡುವ ಪುಸ್ತಕ. ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 113ನೇ ಪುಸ್ತಕವಿದು.
ರಾಧಾಕೃಷ್ಣ ಕೆ. ಉಳಿಯತ್ತಡ್ಕ (ಜನನ 1958) ಕಾಸರಗೋಡಿನ 'ತುಳುನಾಡು ಟೈಮ್' ದೈನಿಕದ ಸುದ್ದಿ ಸಂಪಾದಕರು. ಅವರು ಸಾಹಿತ್ಯ ರಚನೆ, ಸಂಘಟನಾ ಕಾರ್ಯದಲ್ಲಿ ಸಕ್ರಿಯರಾಗಿರು ವವರು. ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕನ್ನಡ ಲೇಖಕರ ಸಂಘದ ಕಾರ್ಯದರ್ಶಿಯಾಗಿ, ಹಲವು ಸಾಂಸ್ಕೃತಿಕ ಸಂಘಟನೆಗಳ ನಿರ್ದೇಶಕರಾಗಿ, ಸದಸ್ಯರಾಗಿರುವ ರಾಧಾಕೃಷ್ಣ ಉಳಿಯತ್ತಡ್ಕರ ಪ್ರಕಟಿತ ಕೃತಿಗಳು: ಸರಳ ಗೀತೆಗಳು, ಈ ನನ್ನ ಶಬ್ದಗಳು, ನೋವ ಜಿನುಗುವ ಜೀವ, ಬೆಂಕಿ ನುಂಗುವ ಹುಡುಗ, ಹದಿಯರೆಯದ ಹನಿಗಳು, ಮತ್ತು ಅರ್ಧ ಸತ್ಯದ ಬೆಳಕು (ಕವನ ಸಂಕಲನಗಳು); ಕುತ್ಯಾಳ ಸಂಪದ, ನೆಲದ ಧ್ಯಾನ, ಮಧೂರು, ಕಯ್ಯಾರ, ಕಯ್ಯಾರ ...
READ MORE