ಗ್ರಾಮಾಭಿವೃದ್ಧಿ ಮಾಡಿದ ಜನನಾಯಕ ಕಂಬದಕೋಣೆ ಆರ್.ಕೆ. ಸಂಜೀವರಾವ್ ಜೀವನ ಚರಿತ್ರೆಯು ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟವಾದ 172ನೇ ಪುಸ್ತಕ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಸಂಜೀವರಾವ್ ಅವರು ಗಾಂಧಿವಾದಿ ಕೂಡ ಆಗಿದ್ದರು. ಅವರ ಜೀವನ ಸಾಧನೆಯನ್ನು ಈ ಕೃತಿಯು ಕಟ್ಟಿಕೊಡುತ್ತದೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಸಾಹಿತಿ ಉಪ್ಪುಂದ ಚಂದ್ರಶೇಖರ ಹೊಳ್ಳರು (ಜನನ 1946) ಉಡುಪಿಯಲ್ಲಿ 74ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಹಳ ಯಶಸ್ವಿಯಾಗಿ ಸಂಘಟಿಸಿದ್ದರು. ಅಂಚೆ ಮತ್ತು ತಂತಿ ಇಲಾಖೆಯಲ್ಲಿ ನೌಕರಿಯಲ್ಲಿದ್ದ ಉಪ್ಪುಂದ ಚಂದ್ರಶೇಖರ ಹೊಳ್ಳರು ನಂತರ ಅದನ್ನು ಬಿಟ್ಟು ಉದ್ಯಮಿಯಾಗಿ ದಾವಣಗೆರೆಯಲ್ಲಿ ಕಟ್ಟಡ ನಿರ್ಮಾಣ ಸಂಸ್ಥೆ ನಡೆಸಿದ್ದರು. ಹೊಳ್ಳರು ಕಾವ್ಯ, ಸಾಹಿತ್ಯ, ಸಂಘಟನೆಗಳಲ್ಲಿ ತೊಡಗಿಸಿಕೊಡಿದ್ದರು. ಅವರ ಮಡದಿ ವರಮಹಾಲಕ್ಷ್ಮಿ ಹೊಳ್ಳ ಅವರು ಅಂಕಣಕಾರ್ತಿ, ಕತೆಗಾರ್ತಿ. ಗ್ರಾಮೀಣಾಭಿವೃದ್ಧಿಯ ಕನಸಿನೊಂದಿಗೆ ಹುಟ್ಟೂರಿಗೆ ಬಂದ ಅವರುಮರಳಿದರು ಶಂಕರ ಕಲಾಮಂದಿರ, ಸೂರ್ಯನಾರಾಯಣ ಗ್ರಂಥ ಭಂಡಾರ, ಮತ್ತು ...
READ MORE