ಕಾಂತಾವರ ಕನ್ನಡ ಸಂಘವು 'ನಾಡಿಗೆ ನಮಸ್ಕಾರ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿರುವ 283ನೇ ಕೃತಿ ’ಕಾಸರಗೋಡು ವಾಸುದೇವ ಆಚಾರ್ಯ’ . ವಾ. ಆಚಾರ್ಯ ಅವರ ಜೀವನ ಚಿತ್ರಣ ಈ ಕೃತಿಯಲ್ಲಿದೆ. ಚಿತ್ರಕಲೆಯಲ್ಲದೆ ಸಾಹಿತ್ಯ, ಸಮಾಜೋದ್ದಾರ ಮತ್ತು ಸಂಘಟನೆಗಳಲ್ಲಿ ಕೆಲಸ ನಿರ್ವಹಿಸಿದ ಬಗೆ, ಪ್ರಚಾರವೆಂದರೆ ದೂರ ನಿಲ್ಲುವ ಅವರು ತಮ್ಮ ಅಧ್ಯಾಪಕ ವೃತ್ತಿಯಲ್ಲಿ ಸಾವಿರಾರು ವಿಧ್ಯಾರ್ಥಿಗಳಿಗೆ ನೆರವು ನೀಡಿ ಸಮಾಜಕ್ಕೆ ನೀಡಿರುವ ಕಾರ್ಯಸಾಧನೆಗಳನ್ನು ಮತ್ತು ಕಾದಂಬರಿಕಾರರಾಗಿ, ಕಥೆಗರರಾಗಿ ರಚಿಸಿದ ಅನೇಕ ಕೃತಿಗಳ ಪರಿಚಯ, ಅವರ ಸ್ನೇಹಿತರು ಕಂಡಂತೆ ಇದ್ದ ಅನನ್ಯತೆಯ ಜೀವನ ಚಿತ್ರಣಗಳನ್ನೊಳಗೊಂಡಿದೆ.
ಲೇಖಕ, ವೃತ್ತಿ ಮಾರ್ಗದರ್ಶಕ ಬಿ. ಎ. ಆಚಾರ್ಯ ಅವರು ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಎಂ.ಐ.ಟಿ.) 38 ವರ್ಷ ಅಧ್ಯಾಪಕರಾಗಿ ನಿವೃತ್ತರಾದವರು. ಪ್ರಸ್ತುತ ಮಣಿಪಾಲದಲ್ಲಿರುವ ಉಡುಪಿ ಸಮೂಹ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ತಮ್ಮ ಅನುಭವವನ್ನು ಧಾರೆ ಎರೆಯುತ್ತಿದ್ದಾರೆ. ಅವರು ಅನೇಕ ತಾಂತ್ರಿಕ ಆವಿಷ್ಕಾರಗಳನ್ನು ಮಾಡಿದ್ದಾರೆ. 'Elipso Graph' ಎನ್ನುವ ದೀರ್ಘವೃತ ರಚಿಸುವ ಸಾಧನ ಪ್ರಮುಖವಾಗಿದೆ. ಅವರು `ಎಸ್.ಎಸ್.ಎಲ್.ಸಿ./ಪಿ.ಯು.ಸಿ. ಬಳಿಕ ಮುಂದೇನು?' ಶೀರ್ಷಿಕೆಯ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣದ ಮಾರ್ಗದರ್ಶನ ಮಾಡುತ್ತಿದ್ದಾರೆ. ನಿವೃತ್ತಿಯ ಬಳಿಕ ಅವರು ಮೂಡಬಿದ್ರೆಯ ಎಸ್.ಕೆ.ಎಫ್. ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶಿಕ್ಷಣ ಸಲಹೆಗಾರರಾಗಿ ಸೇವೆಸಲ್ಲಿಸಿದ್ದಾರೆ. ಉಡುಪಿ ಜಿಲ್ಲಾ ...
READ MORE