ಸಮಾಜಕ್ಕಾಗಿ ಬದುಕಿದ ವೈದ್ಯೆ ಸಾಹಿತಿ ಡಾ. ಸಬಿತಾ ಮರಕಿಣಿ ಅವರ ಕುರಿತ ಈ ಪುಸ್ತಕವು ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯ 193ನೆಯದ್ದಾಗಿದೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ಕುಂಬ್ಳೆ ಸಮೀಪದ ನಾರಾಯಣಮಂಗಲದ ಹಿಳ್ಳೆಮನೆಯವರಾದ ಸಬಿತಾ ಅವರು ಪಂಡಿತ್ ತಾರಾನಾಥ ಅವರ ’ಪ್ರೇಮಾಯತನ’ ಆಶ್ರಮದಲ್ಲಿದ್ದವರು. ತಾರಾನಾಥರ ಸಮ್ಮುಖದಲ್ಲಿಯೇ ಅವರು ಡಾ. ಎಂ.ಬಿ. ಮರಕಿಣಿ ಅವರ ಜೊತೆ ಮದುವೆಯಾದರು. ವೈದ್ಯಕೀಯ ವೃತ್ತಿಯ ಜೊತೆಗೆ ಕವಿತೆ ಬರೆಯವುದರಲ್ಲಿಯೂ ಅವರಿಗೆ ಆಸಕ್ತಿ. ಸಬಿತಾ ಅವರ ಬದುಕು-ಸಾಧನೆಯನ್ನು ಈ ಕೃತಿ ಕಟ್ಟಿಕೊಡುತ್ತದೆ.
ಡಾ. ಹರಿಕೃಷ್ಣ ಭರಣ್ಯರು (ಜನನ 1951) ತಮಿಳುನಾಡಿನ ಮದುರೈ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಸದ್ಯ ಕುಂಬಳೆಯ ನಾರಾಯಣ ಮಂಗಲದಲ್ಲಿ ನೆಲೆಸಿದ್ದಾರೆ. ಅವರ ಹುಟ್ಟು ದಕ್ಷಿಣ ಕನ್ನಡ ಜಿಲ್ಲೆಯ ಪಾಣಾಜೆಯ ಭರಣ್ಯ. ಹವಿಗನ್ನಡ ಮಾತೃಭಾಷೆಯ ಭರಣ್ಯರು ಕನ್ನಡವಲ್ಲದೆ ಇಂಗ್ಲಿಷ್, ತಮಿಳು, ತುಳು, ಮಲಯಾಳಂ ಮತ್ತು ಹಿಂದಿ ಭಾಷೆಗಳನ್ನು ಬಲ್ಲರು. ಸಂಶೋಧನೆ - ಪ್ರವೇಶ, ಸಂಶೋಧನ ವಿಧಾನ, ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ, ಹವ್ಯಕಾಧ್ಯಯನ, ಕಾವೇರಿಕಾನ ಕೃಷ್ಣ ಭಟ್ಟರ ಬದುಕು ಇತ್ಯಾದಿ ಅವರ ಕೃತಿಗಳು. ಭರಣ್ಯರು 'ಮೂಡು ಮಜಲು' ಮತ್ತು ...
READ MORE