ಕನ್ನಡ ನವೋದಯ ಕಾವ್ಯದ ’ಮುಂಗೋಳಿ’ ಎಂದು ಕರೆಯಲಾಗುವ ಮುದ್ದಣ ಕವಿಯ ಜೀವನ ಸಾಧನೆಯನ್ನು ಪರಿಚಯಿಸುವ ಕೃತಿ. ಮುದ್ದಣ-ಮನೋರಮೆಯರ ಸಲ್ಲಾಪ ಹಾಗೂ ರಾಮಾಯಣ ಮಹಾಕಾವ್ಯದ ಮೂಲಕ ಹೆಸರಾದವರು ಮುದ್ದಣ. ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ’ನಾಡಿಗೆ ನಮಸ್ಕಾರ’ ಸರಣಿಯ 110ನೇ ಕೃತಿ.
ಉಡುಪಿಯ ವಿದ್ವತ್ ಪರಂಪರೆಯ ಬಹುಮುಖ್ಯ ಕೊಂಡಿಯಾಗಿದ್ದ ಸಾಹಿತಿ, ವಿದ್ವಾಂಸ ರಾಜಗೋಪಾಲ ಆಚಾರ್ಯರು 1926ರಲ್ಲಿ ಜನಿಸಿದರು. ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರರು. ಸಂಸ್ಕೃತದಲ್ಲಿ ಸಾಹಿತ್ಯ ಶಿರೋಮಣಿ ಹಾಗೂ ವಿದ್ವಾನ್ ಪದವಿಗಳನ್ನು ಪಡೆದು ಉಡುಪಿಯ ಸಂಸ್ಕೃತ ಮಹಾವಿದ್ಯಾಲಯ ದಲ್ಲಿ ಅಧ್ಯಾಪಕರಾಗಿದ್ದರು. ಬಾಲ್ಯದಿಂದಲು ಸಾಹಿತ್ಯ ಸಂಗೀತದಲ್ಲಿ ಅತ್ಯಂತ ಆಸ್ಥೆ ಉಳ್ಳವರು. ಅವರು ಕನ್ನಡ ಮತ್ತು ಸಂಸ್ಕೃತದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ‘ಕವಿ ವರ ಮುದ್ದಣ’ ಅವರ ಅತ್ಯುನ್ನತ ಕೃತಿಗಳಲ್ಲೊಂದು. ...
READ MORE