ಕನ್ನಡದ ನವೋದಯದ ಪ್ರಮುಖ ಕವಿಗಳಲ್ಲೊಬ್ಬರು ಎಸ್.ವಿ. ಪರಮೇಶ್ವರಭಟ್ಟರು. ಕಾಳಿದಾಸನನ್ನು ಕನ್ನಡಕ್ಕೆ ತಂದ ಪರಮೇಶ್ವರಭಟ್ಟರ ಜೀವನ ಸಾಧನೆಗಳನ್ನು ಈ ಪುಸ್ತಕ ಪರಿಚಯಿಸುತ್ತದೆ. ಕಾಂತಾವರ ಕನ್ನಡ ಸಂಘವು ಪ್ರಕಟಿಸುತ್ತಿರುವ ನಾಡಿಗೆ ನಮಸ್ಕಾರ ಸರಣಿಯಲ್ಲಿ ಪ್ರಕಟವಾದ 111ನೇ ಪುಸ್ತಕವಿದು.
ಸಾಹಿತಿ ಎಚ್. ಆರ್. ವಿಶ್ವಾಸ ಪ್ರಸ್ತುತ ಮಂಗಳೂರಿನ ಸಂಘನಿಕೇತನದಲ್ಲಿ ಅಖಿಲ ಭಾರತ ಪ್ರಶಿಕ್ಷಣ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಿಎಚ್.ಡಿ. ಪದವೀಧರರು. ಕನ್ನಡರತ್ನ ಮತ್ತು ರಾಷ್ಟ್ರಭಾಷಾ ಪ್ರವೀಣ ಪರೀಕ್ಷೆಗಳನ್ನು ಪಾಸ್ ಮಾಡಿ ಬಹುಭಾಷಾ ಸಾಹಿತ್ಯ ವಿಹಾರಿಯಾಗಿದ್ದಾರೆ. ಲಖನೋದ ಭಾವೂರಾವ್ ದೇವರಸ್ ನ್ಯಾಸದಿಂದ ಯುವ ಸಾಹಿತ್ಯಕಾರ ಪುರಸ್ಕಾರ ಪಡೆದಿದ್ದು, ಸಂಸ್ಕೃತದಲ್ಲಿ 16 ಕೃತಿಗಳನ್ನು ಪ್ರಕಟಿಸಿದ್ದಾರೆ. ಮೂಲ (ಕಾದಂಬರಿ), ಧ್ವನಿ, ಮತ್ತೆ ಹೊತ್ತಿತು ಹೀಬ್ರೂ ಹಣತೆ, ಆರನೆಯ ಇಂದ್ರಿಯ (ಸಣ್ಣಕತೆಗಳ ಸಂಕಲನ), ಸ್ಮೃತಿಪಥ (ನೆನಪಿನ ಚಿತ್ರಗಳು) ಅವರ ಪ್ರಮುಖ ಕೃತಿಗಳು. ಎಸ್.ಎಲ್. ಭೈರಪ್ಪನವರ ‘ಆವರಣ’ ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ...
READ MORE