ಮಹಾತ್ಮರ ಜೀವನದಿಂದ ಪ್ರಭಾವಿತರಾದ ಪ್ರೇಮಚಂದ ಅವರು ಹಿಂದಿ ಸಾಹಿತ್ಯದಲ್ಲಿ ಅಪ್ರತಿಮರು. ಕಲೆಗಾಗಿ ಕಲೆಯಲ್ಲ; ಕಲೆ ಜೀವನಕ್ಕಾಗಿ ಎಂದು ನಂಬಿದವರು. ಹಾಗೆಯೇ, ಸಾಹಿತ್ಯವನ್ನು ಸೃಷ್ಟಿಸಿದವರು. ಸಾಹಿತ್ಯವು ಯಾವ ಪಂಥದೆಡೆ ನಡೆಯಬೇಕು ಎಂಬ ನಿಶ್ಚಿತ ಗುರಿ ಇವರ ಸಾಹಿತ್ಯದಲ್ಲಿ ಕಾಣಬಹುದು. ಹಿಂದಿ ಸಾಹಿತ್ಯ ದರ್ಶನ, ಪ್ರೇಮಚಂದರ ಜೀವನ, ಕಥಾಸಾಹಿತ್ಯ, ಪತ್ರಸಾಹಿತ್ಯ, ಪ್ರಬಂಧ ಸಾಹಿತ್ಯ, ಬಾಲಸಾಹಿತ್ಯ, ಪ್ರೇಮಾಶ್ರಮ (ಕಾದಂಬರಿ-ಮೇವುಂಡಿ ಮಲ್ಲಾರಿ) ಅನುಕ್ರಮವಾಗಿ ಗುರುರಾಜ ಜೋಶಿ, ಎಸ್.ವಿ.ಭಟ್ಟ, ಮೇವುಂಡಿ ಮಲ್ಲಾರಿ, ವೆಂ.ಮು. ಜೋಶಿ, ಗುರುನಾಥ ಜೋಶಿ, ಬಾಳಾಚಾರ್ಯ ಅವಧಾನಿ ಅವರ ಲೇಖನಗಳನ್ನು ಬುರ್ಲಿ ಬಿಂದು ಮಾಧವ ಆಚಾರ್ಯರು ಸಂಪಾದಿಸಿದ್ದಾರೆ.
ಬುರ್ಲಿ ಬಿಂದುಮಾಧವ (ಆಚಾರ್ಯ) ಅವರು ಸ್ವಾತಂತ್ಯ್ರ ಯೋಧರು. ಮಧ್ವ ತತ್ವ ಅನುಯಾಯಿಗಳು. ತಂದೆ ವೆಂಕಣ್ಣಾ ಚಾರ್ಯರು. ಬಾಗಲಕೋಟೆಯ ಕನ್ನಡ ಶಾಲೆಯಲ್ಲಿ (jಜನನ: 18-08-1899) ಮುಲ್ಕಿ ಪರೀಕ್ಷೆ ಮುಗಿಸಿ, ಧಾರವಾಡದಲ್ಲಿ ಶಿಕ್ಷಕ ತರಬೇತಿ ಪಡೆದು, 1920ರಲ್ಲಿ ಬಿಜಾಪುರ ಜಿಲ್ಲೆಯ ಗಲಗಲಿಯಲ್ಲಿ ಶಿಕ್ಷಕರಾದರು. ಮಹಾತ್ಮಾ ಗಾಂಧಿಯವರ ಪ್ರಭಾವಕ್ಕೊಳಗಾಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಧಾರವಾಡಕ್ಕೆ ಬಂದರು. ಅಲ್ಲಿ ಸ್ಥಾಪಿತವಾದ ಗಾಂಧೀ ವಿಚಾರದ ರಾಷ್ಟ್ರೀಯ ಶಾಲೆಯಲ್ಲಿ ಉಪಾಧ್ಯಾಯರಾದರು. ಬಡ ವಿದ್ಯಾರ್ಥಿಗಳ ಯೋಗಕ್ಷೇಮಕ್ಕಾಗಿ ಆಶ್ರಮ ಸ್ಥಾಪಿಸಿದರು. ಉಪ್ಪಿನ ಸತ್ಯಾಗ್ರಹ (1930), ಅರಣ್ಯ ಸತ್ಯಾಗ್ರಹ (1932), ವೈಯಕ್ತಿಕ ಸತ್ಯಾಗ್ರಹ (1941) ಮತ್ತು ಚಲೇಜಾವ್ ಚಳುವಳಿ (1942)ಯಲ್ಲಿದ್ದರು. ಪತ್ನಿ ಪದ್ಮಾವತಿ ಮತ್ತು ಹಿರಿಯ ಮಗ ...
READ MORE