‘ಅಕಾರಾದಿಯಲ್ಲಿ ಕುವೆಂಪು ಕವನಗಳು’ ಎಚ್. ತಿಪ್ಪೇರುದ್ರಸ್ವಾಮಿ ಅವರ ಸಂಪಾದಕತ್ವದ ಕೃತಿಯಾಗಿದೆ. ಇದು ಹೆಸರೇ ಸೂಚಿಸುವಂತೆ ಕುವೆಂಪು ಅವರ ಕವನಗಳ ಅಕಾರಾದಿಯನ್ನು ಮುಂದಿಡುತ್ತದೆ. ಈ ಅಕಾರಾದಿಯನ್ನು ಎರಡು ಬಗೆಯಲ್ಲಿ ವರ್ಗಿಕರಿಸಿಕೊಂಡಿರುವುದು ಗಮನಾರ್ಹವಾಗಿದೆ. ಮೊದಲು, ಕವನಗಳ ಮೊದಲ ಸಾಲುಗಳನ್ನು ಅಕಾರಾದಿಯಲ್ಲಿ ಪಟ್ಟಿಮಾಡಿದೆ. ಎರಡನೆಯದಾಗಿ, ಕವನದ ಶೀರ್ಷಿಕೆಗಳನ್ನು ಅಕಾರಾದಿಯಲ್ಲಿ ಪಟ್ಟಿಮಾಡಲಾಗಿದೆ. ಇದರಲ್ಲಿ ಕುವೆಂಪು ಅವರ 1920 ರಿಂದ 1981ರ ವರೆಗೆ ಬರೆದ ಒಟ್ಟು 25 ಕವನ ಸಂಗ್ರಹಗಳ ಕವನಗಳೂ ಒಳಗೊಂಡಿವೆ. ಶಿಶುಗೀತೆಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿದ್ದು ಓದುಗರಿಗೆ, ಅಧ್ಯಯನಕಾರರಿಗೆ ಹೆಚ್ಚು ಅನುಕೂಲವಾಗಿದೆ, ಮೇಲುನೋಟಕ್ಕೆ, ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರ ಈ ಕೃತಿ ಒಂದು ರೀತಿಯಲ್ಲಿ ಶುಷ್ಕವೆಂದೆನಿಸಬಹುದು. ಕೃತಿಯಿಂದ ಅನ್ಯವಾಗಿ ಬರೆದಾಗ ಮಾತ್ರ ಇಂಥ ಭಾವ ಮೂಡಲು ಸಾಧ್ಯ, ನೀರಿನ ಆಳದಲ್ಲಿ ಇಳಿದಾಗ ಅಲ್ಲಿ ಏನೆಲ್ಲವೂ ದೊರಕುತ್ತದ ಯಲ್ಲವೆ? ಹಾಗೆಯೇ ಈ ಅಕಾರಾದಿಯ ಕೃತಿಯ ಆಳಕ್ಕೆ ಇಳಿದರೆ ಇಲ್ಲಿಯ ನಿಮಗೆ ಕಡೆದಷ್ಟು ಬೆಣ್ಣೆ ಇದೆ, ಕಡೆಯದಿದ್ದರೆ ಏನೂ ಇಲ್ಲ ! ಇದಕ್ಕೆ ಬುದ್ಧಿಯ ಬೇಕು, ಭಾವವೂ ಬೇಕು, ಅರ್ಥೈಸುವಿಕೆಯೂ ಬೇಕು.
ಶರಣರನ್ನು ಕುರಿತು ಕಾದಂಬರಿ ರಚಿಸುವ ಮೂಲಕ ಜನಪ್ರಿಯರಾಗಿರುವ ಎಚ್. ತಿಪ್ಪೇರುದ್ರಸ್ವಾಮಿ ಅವರು ಕರ್ನಾಟಕದ ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ ನಡೆಸಿದವರು. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿಯವರಾದ ತಿಪ್ಪೇರುದ್ರಸ್ವಾಮಿ ಜನಿಸಿದ್ದು 1928ರ ಫೆಬ್ರುವರಿ 3ರಂದು. ತಂದೆ ಚೆನ್ನಮಲ್ಲಯ್ಯ, ತಾಯಿ ಬಸಮ್ಮ. ಹೊನ್ನಾಳಿ, ಶಿರಾಳಕೊಪ್ಪ ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಆರಂಭಿಕ ಶಿಕ್ಷಣ ಪಡೆದ ತಿಪ್ಪೇರುದ್ರಸ್ವಾಮಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ (ಎಂ.ಎ.) ಪಡೆದರು. ಶರಣರ ಅನುಭಾವ ಪ್ರಪಂಚ ಮಹಾಪ್ರಬಂಧಕ್ಕೆ ಡಾಕ್ಟೊರೇಟ್ ಪದವಿ (1962) ಪಡೆದರು. ಹಾಸನದ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ ತಿಪ್ಪೇರುದ್ರಸ್ವಾಮಿ ...
READ MORE