‘ಪೂರ್ವಾಪರ ಕಥನ’ ಸಾಮಯಿಕ ಲೇಖನ ಹಾಗೂ ಮುನ್ನುಡಿಗಳ ಕಟ್ಟು. ಕನ್ನಡ, ಸಂಸ್ಕೃತ ಭಾಷೆ ಸಾಹಿತ್ಯಗಳಲ್ಲಿ ಅಪಾರ ಪಾಂಡಿತ್ಯ ಹೊಂದಿರುವ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಬಹುಶ್ರುತ ವಿದ್ವಾಂಸರ ಹಾಗೂ ಸಂಸ್ಕೃತಿ ಚಿಂತಕರು. ಅವರು ಕಳೆದ ಒಂದೆರಡು ವರ್ಷಗಳಿಂದ ದಿನಪತ್ರಿಕೆ, ಸಾಪ್ತಾಹಿಕ ಮತ್ತು ಮಾಸಪತ್ರಿಕೆಗಳಿಗೆ ಬರೆದ ಲೇಖನಗಳು, ಹಿರಿಯ ಕಿರಿಯ ಲೇಖಕರ, ಎಲೆಮರೆಯ ಸಾಧಕರ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಹೊಸದಾಗಿ ಹೆಜ್ಜೆ ಇಡುತ್ತಿರುವವರ ಪುಸ್ತಕಗಳಿಗೆ ಪ್ರೀತಿಯಿಂದ ಬರೆದ ಮುನ್ನುಡಿಗಳು ಪೂರ್ವಾಪರ ಕಥನವಾಗಿ ರೂಪುಗೊಂಡಿದೆ.
ಈ ಕೃತಿಯ ಮೊದಲ ಭಾಗ ಪೂರ್ವರೂಪದಲ್ಲಿ ಸಾಮಯಿಕ ಲೇಖನಗಳಿವೆ. ಎರಡನೆಯ ಭಾಗ ಉತ್ತರರೂಪದಲ್ಲಿ ಮುನ್ನುಡಿ ಬರೆಹಗಳಿವೆ. ಅನುಬಂಧದಲ್ಲಿ ಮಲ್ಲೇಪುರಂ ಅವರ ಸಂದರ್ಶನ ಮತ್ತು ಮತ್ತು ಪೂರಕ ಮಾಹಿತಿಗಳಿವೆ. ಈ ಕೃತಿಯಲ್ಲಿ ಸಾಹಿತ್ಯ, ಶಾಸ್ತ್ರ, ಸಂಗೀತ, ಯೋಗ ಹೀಗೆ ಹತ್ತಾರು ವಿಷಯಗಳ ಮೇಲಿನ ಬರೆಹಗಳುಂಟು. ಈ ಹೃದಯಕ್ಕೆ ಬೇಕಾಗುವ ಶಾಸ್ತ್ರಾನುಸಂಧಾನದಂತೆಯೇ ಹೃದಯಕ್ಕೆ ಬೇಕಾಗುವ ರಸಪರವಶತೆಯೂ ಉಂಟು ಈ ಸಾರಸ್ವತ ನದಿಯಲ್ಲಿ ಮಿಂದೇಳುವುದು ಒಂದು ಅಪೂರ್ವ ಅನುಭವ.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಮಲ್ಲೇಪುರಂ ಜಿ. ವೆಂಕಟೇಶ ಅವರು 1952, ಜೂನ್ 5ರಂದು ಬೆಂಗಳೂರು ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು. ತಂದೆ ಗಂಗಯ್ಯ, ತಾಯಿ ವೆಂಕಟಮ್ಮ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾಭ್ಯಾಸ ನೆಲಮಂಗಲದ ಸರ್ಕಾರಿ ಮತ್ತು ಹೈಯರ್ಸೆಕೆಂಡರಿ ಶಾಲೆ. ಮೊದಲ ಸಂಸ್ಕೃತ-ಕನ್ನಡ ಗುರುಗಳು ಎಸ್.ವಿ. ರಾಮಸ್ವಾಮಿ ಅಯ್ಯಂಗಾರ್. ಸಿದ್ಧಗಂಗಾ ಮಠದಲ್ಲಿ ಕನ್ನಡ ಪಂಡಿತ್ ಮತ್ತು ಸಂಸ್ಕೃತ ಅಲಂಕಾರವಿದ್ವತ್ ವ್ಯಾಸಂಗ. ವಿದ್ವಾನ್ ಬಿ. ವೆಂಕಟರಾಮಭಟ್ಟ, ಇವರಲ್ಲಿ ಕಾವ್ಯಾಲಂಕಾರಗಳ ಅಧ್ಯಯನ. ಬೆಂಗಳೂರಿನ ಶ್ರೀರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಆದಿದೇವಾನಂದರಿAದ ಅದ್ವೈತ ವೇದಾಂತದ ಅನುಗ್ರಹ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ., ಮೂರನೇ ರ್ಯಾಂಕಿನೊಡನೆ ಕುವೆಂಪು ಚಿನ್ನದ ...
READ MORE