‘ಮಹಿಳಾ ಕಥಾಸಂಪದ’ ಕೃತಿಯು ಪುಂಡಲೀಕ ಕಲ್ಲಿಗನೂರ ಅವರ ಸಂಪಾದಿತ ಮೂರು ತಲೆಮಾರಿನ ಕನ್ನಡ ಲೇಖಕಿಯರ ಉತ್ತಮ 108 ಕತೆಗಳಾಗಿವೆ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಕೃತಿಯ ಬೆನ್ನುಡಿಯಲ್ಲಿ, ಇದೊಂದು ಅದ್ಭುತ ಸೃಜನಶೀಲ ಸಾಹಸ. ಆಧುನಿಕ ಕನ್ನಡ ಕಥೆಗಳು ಸಹಸ್ರಾರು ಇವೆ. ಅವುಗಳ ವೈವಿಧ್ಯಮಯವಾಗಿವೆ. ಅಂಥ ಸಾವಿರಾರು ಕತೆಗಳಿಂದ ನೂರಾ ಎಂಟು ಲೇಖಕಿಯರ ಪ್ರಾತಿನಿಧಿಕ ಕಥೆಗಳನ್ನು ಜೋಡಿಸುವುದೂ ಆಕೃತಿ ಕಟ್ಟುವುದೂ ಕಷ್ಟದ ಕೆಲಸವಾಗಿದ್ದು, ಇಲ್ಲಿಯ ಪ್ರತಿಯೊಂದು ಕಥೆಗಳಿಗೂ ರೇಖಾಚಿತ್ರ ರಚಿಸಿರುವುದು ಈ ಸಂಕಲನದ ವೈಶಿಷ್ಟ್ಯವಾಗಿದೆ. ಇಲ್ಲಿ ಆಯ್ದಿರುವ ಕಥೆಗಳು ಈವರೆಗೂ ಬಂದಂಥ ಸಂಕಲನಗಳಿಗಿಂತ ವಿಶಿಷ್ಟ ಬಗೆಯ ಜೋಡಣೆಯನ್ನು ಹೊಂದಿವೆ. ಕನ್ನಡ ಸಂಸ್ಕೃತಿಯ ಮಹಿಳಾ ಸಂವೇದನೆ ಇಲ್ಲಿ ಆಕರಗೊಂಡಿವೆ. ವಸ್ತು, ಶೈಲಿ, ಭಾಷೆ- ಈ ಎಲ್ಲಾ ದೃಷ್ಟಿಯಿಂದ ಈ ಸಂಪುಟವು ಓದಿಗೂ ಅಧ್ಯಯನಕ್ಕೂ ತೆರೆದ ಬಾಗಿಲಾಗಿದೆ ಎಂದು ಇಲ್ಲಿ ವಿಶ್ಲೇಷಿತವಾಗಿದೆ.
ರೇಖಾಚಿತ್ರ ಕಲಾವಿದ ಹಾಗೂ ಸಾಹಿತಿ ಪುಂಡಲೀಕ ಕಲ್ಲಿಗನೂರ ಅವರು ಗದಗ ಜಿಲ್ಲೆಯ ಗಜೇಂದ್ರಗಡದವರು. ತಂದೆ ವೀರಪ್ಪ, ತಾಯಿ ಮಲ್ಲಮ್ಮ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಅವರ ರೇಖಾಚಿತ್ರಗಳು ಬೆಳಕು ಕಂಡಿವೆ. ಪುಸ್ತಕಗಳಿಗೆ ಮುಖಪುಟಗಳನ್ನು ರಚಿಸಿದ್ದಾರೆ. ಕೃತಿಗಳು: ಸಲಿಲಧಾರೆ, ಪ್ರೀತಿಮಳೆ (ಕವನ ಸಂಕಲನಗಳು), ದುರ್ಗಮ (ನಾಟಕ) ಕಾಡು ನಮ್ಮ ನಾಡು (ಮಕ್ಕಳ ನಾಟಕ) ಅರಿವೇ ಗುರು (ಪ್ರಬಂಧಗಳು) ಪ್ರಭಾತ್ ಸರ್ಕಸ್ (ಕಥಾಸಂಕಲನ) ಬೇಲೂರು ಹಳೇಬೀಡು – ಶಿಲ್ಪಕಲಾ ಸಾಮ್ರಾಜ್ಯ (ಪರಂಪರೆ ಕಳಕಳಿಯ ಲೇಖನಗಳು), "ಶಿಲ್ಪಕಲಾ ದೇಗುಲಗಳು" ಗ್ರಂಥಕ್ಕೆ ಇತ್ತೀಚೆಗಷ್ಟೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಲಂಕೇಶ್ ಪತ್ರಿಕೆಯ ನೀಲು ಕವಿತೆಗಳಿಗೆ ಇವರದೇ ರೇಖಾ ಚಿತ್ರ ...
READ MORE