ಕವಿ ಬಿ.ಎ. ಸನದಿ ಅವರ ಆಯ್ದ ಪ್ರಾತಿನಿಧಿಕ ಕವನಗಳ ಸಂಗ್ರಹ ಕೃತಿ-ಶಾಂತಿಗೊಂದು ಸವಾಲು. ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಈ ಕೃತಿಯ ಸಂಪಾದಕರು. ತಮ್ಮ ನುಡಿಯಲ್ಲಿ ‘ಸನದಿಯವರು ಕನ್ನಡದ ಪಿಸುದನಿಯ ಕವಿ. ಅಬ್ಬರದಲ್ಲಿ ಮೆರೆದವರಲ್ಲ; ತನ್ನ ದನಿಯೇ ಮಿಗಿಲೆಂದು ಹಾರಾಡಿದವರಲ್ಲ. ಬರೆಯಬೇಕಾದ ಒಳಗಿನೊತ್ತಡದಲ್ಲಿ ಬರೆಯಲೇಬೇಕಾದ್ದನ್ನು ಬರೆಯುತ್ತಾ ಬಂದವರು. ತಾವು ನಂಬಿದ ಮಾನವತಾವಾದದಲ್ಲಿ ಇಂದಿಗೂ ನಂಬಿಕೆ ಕಳೆದುಕೊಳ್ಳದೆ ಬದ್ಧತೆಯಲ್ಲಿ ಬದುಕು ಕಟ್ಟಿಕೊಂಡವರು. ಆ ಯಾನ ಸುದೀರ್ಘವಾದಷ್ಟೇ ವೈವಿಧ್ಯಪೂರ್ಣವೂ ಆಗಿದೆ. ಇವರ ಕವನಗಳು ಸಾಮಾನ್ಯ ಜನರ ಪರವಾಗಿರುವ ದನಿಗಳಾಗಿವೆ. ಇಲ್ಲಿ ದಯಾರ್ದ್ರ ಭಾವನೆಯೊಂದಿಗೆ ಮಾನವೀಯತೆ ತಲೆ ಎತ್ತಿ ನಿಂತಿದೆ. ಅಸಮಾನತೆ, ಶೋಷಣೆ, ಅನ್ಯಾಯದ ವಿರುದ್ಧ ಆಕ್ರೋಶವಿದೆ. ಒಂದು ಸಿದ್ಧಾಂತದ ಬದ್ಧತೆಗೆ ಒಡ್ಡಿಕೊಂಡು ಜೀವನಾನುಭವ ಕಲಿಸಿದ ನಿಜದ ರೂಪಕಗಳು. ಕವನಗಳನ್ನು ಮೂರು ಭಾಗಗಳನ್ನಾಗಿಸಿದೆ. ಒಟ್ಟು 92 ಕವನಗಳಿವೆ’ ಎಂದು ಪ್ರಶಂಸಿಸಿದ್ದಾರೆ.
ಹಿರಿಯ ಸಾಹಿತಿಗಳಾದ ಎಸ್.ಜಿ. ಸಿದ್ಧರಾಮಯ್ಯನವರು ಹುಟ್ಟಿದ್ದು ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ತಾಲ್ಲೂಕಿನ ಸಿಂಗಾಪುರ ಗ್ರಾಮದಲ್ಲಿ. ತಂದೆ-ಗುರುಭಕ್ತಯ್ಯ, ತಾಯಿ-ರೇವಮ್ಮ. ಪ್ರಾರಂಭಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದ ಅವರು ಪ್ರೌಢಶಾಲೆ ಚಿಕ್ಕನಾಯಕನಹಳ್ಳಿ ಪೂರ್ಣಗೊಳಿಸಿದರು. ಕಾಲೇಜು ವಿದ್ಯಾಭ್ಯಾಸವನ್ನು ತುಮಕೂರಿನಲ್ಲಿ ಆರಂಭಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಆನಂತರ ತುಮಕೂರಿನ ಸಿದ್ಧಗಂಗಾ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದ ಅವರು ಮಡಿಕೇರಿ, ಸಿಂಧನೂರು, ತುಮಕೂರು, ಕೊರಟಗೆರೆ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ತುಮಕೂರು, ಚಿಕ್ಕನಾಯಕನ ಹಳ್ಳಿ, ಹೊಸದುರ್ಗ, ಮಧುಗಿರಿ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ಹುದ್ದೆ ನಿರ್ವಹಿಸಿದ್ದಾರೆ. ಅಲ್ಲದೇ ದುಃಸ್ಥಿತಿಯಲ್ಲಿದ್ದ ಕಾಲೇಜುಗಳಿಗೆ ಶೈಕ್ಷಣಿಕ ಕಾಯಕಲ್ಪ ...
READ MORE